ADVERTISEMENT

ಶ್ರೀಗಂಧ ಕಳ್ಳರಿಂದ ಹಲ್ಲೆ ಅರಣ್ಯಾಧಿಕಾರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 19:46 IST
Last Updated 19 ಡಿಸೆಂಬರ್ 2019, 19:46 IST
ಗೋವಿಂದರಾಜ್     
ಗೋವಿಂದರಾಜ್        

ಹೊಸನಗರ: ತಾಲ್ಲೂಕಿನ ಹೆಗ್ಗರಸು ಗ್ರಾಮದಲ್ಲಿ ಬುಧವಾರ ರಾತ್ರಿ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿ ಮೇಲೆ ಶ್ರೀಗಂಧ ಕಳ್ಳರು ಗಂಧದ ತುಂಡು ಹಾಗೂ ಮಚ್ಚಿನಿಂದ ದಾಳಿ ನಡೆಸಿದ್ದು, ಡಿಆರ್‌ಎಫ್‌ಒ (ಉಪ ವಲಯ ಅರಣ್ಯಾಧಿಕಾರಿ) ಗೋವಿಂದರಾಜ್ ಅವರ ತಲೆ ಹಾಗೂ ಎದೆಗೆ ತೀವ್ರ ಪೆಟ್ಟು ಬಿದ್ದಿದೆ.

ಹೆಗ್ಗರಸು ಗ್ರಾಮದ ಮೋಹನ ಮತ್ತು ಕುಮಾರ್ ಸೇರಿದಂತೆ ಐವರ ತಂಡ ಹಲ್ಲೆ ಮಾಡಿದೆ. ಗೋವಿಂದರಾಜ್ ಅವರು ಹೊಸನಗರ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು ಪತ್ತೆಗಾಗಿ ಕಾರ್ಯಾಚರಣೆ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT