ADVERTISEMENT

ಅರಣ್ಯ ಇಲಾಖೆ ವಾಚರ್ ಆತ್ಮಹತ್ಯೆ; ಈಶ್ವರ್ ಖಂಡ್ರೆ ಕಾಟವೇ ಕಾರಣ ಎಂದ ಭಗವಂತ ಖೂಬಾ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 12:24 IST
Last Updated 6 ಫೆಬ್ರುವರಿ 2026, 12:24 IST
<div class="paragraphs"><p>ಅಂಕುಶ್ ಸುಧಾಮ</p></div>

ಅಂಕುಶ್ ಸುಧಾಮ

   

ಬೀದರ್: ಅರಣ್ಯ ಇಲಾಖೆಯ ವಾಚರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾಲ್ಕಿ ಪಟ್ಟಣದ ಅರಣ್ಯ ಇಲಾಖೆ ಕಚೇರಿ ಸಮೀಪದ ವಸತಿ ಗೃಹದಲ್ಲಿ ಶುಕ್ರವಾರ ನಡೆದಿದೆ.

ಭಾಲ್ಕಿ ತಾಲ್ಲೂಕಿನ ಬೋಳೆಗಾವ್ ಗ್ರಾಮದ ಅಂಕುಶ್ ಸುಧಾಮ ಮೃತರು. ಶುಕ್ರವಾರ ಬೆಳಿಗ್ಗೆ ವಸತಿ ಗೃಹದಲ್ಲಿ ನೇಣು ಹಾಕಿಕೊಂಡು ಜೀವ ತ್ಯಜಿಸಿದ್ದಾರೆ.

ADVERTISEMENT

ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರ ಕಾಟಕ್ಕೆ ಅರಣ್ಯ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿನ ತನಿಖೆ ನಡೆಸಬೇಕೆಂದು ಕೇಂದ್ರದ ಮಾಜಿ ಸಚಿವರೂ ಆದ ಬಿಜೆಪಿ ಮುಖಂಡ ಭಗವಂತ ಖೂಬಾ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.