ADVERTISEMENT

ಪರಿಷತ್‌ ಗಲಾಟೆ: ಸಮಿತಿ ರಚಿಸಲು ಸಭಾಪತಿಗೆ ಹೊರಟ್ಟಿ ಪತ್ರ

​ಪ್ರಜಾವಾಣಿ ವಾರ್ತೆ
Published 14 ಜನವರಿ 2021, 19:48 IST
Last Updated 14 ಜನವರಿ 2021, 19:48 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ   

ಹುಬ್ಬಳ್ಳಿ: ವಿಧಾನ ಪರಿಷತ್‌ನಲ್ಲಿ ಡಿ.15 ರಂದು ನಡೆದಂತಹ ಘಟನೆಗಳು ಮರುಕಳಿಸದಂತೆ ನಿಯಮಾವಳಿಗೆ ಸೂಕ್ತ ಮಾರ್ಪಾಡು ಮಾಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣ್ಯರ ಸಮಿತಿ ರಚಿಸಬೇಕು ಎಂದು ವಿಧಾನ ಪರಿಷತ್‌
ಸದಸ್ಯ ಬಸವರಾಜ ಹೊರಟ್ಟಿ, ಪರಿಷತ್‌ ಸಭಾಪತಿ ಅವರಿಗೆ ಪತ್ರ ಬರೆದಿದ್ದಾರೆ.

ಪರಿಷತ್‌ನಲ್ಲಿ ನಡೆದ ಘಟನೆಯ ಭಾಗವಾಗಿರುವ ಪ್ರತಿ ಸದಸ್ಯರಿಗೂ ಅದು ಕಪ್ಪುಚುಕ್ಕೆಯಾಗಿ ಹೊರಹೊಮ್ಮಿದೆ. ಎಲ್ಲರಿಗೂ ತಪ್ಪಿನ ಅರಿವು ಆಗುವುದರ ಜತೆಗೆ ಇಂತಹ ಅಪವಸ್ಯಕ್ಕೆ ಇನ್ನೊಮ್ಮೆ ಈಡಾಗುವುದಿಲ್ಲ ಎನ್ನುವುದನ್ನು ಜನರಿಗೆ ಮನದಟ್ಟು ಮಾಡಿಕೊಡಬೇಕಾಗಿದೆ ಎಂದಿದ್ದಾರೆ.

ನೀವು ಮಾಡಿರುವ ಸದನ ಸಮಿತಿಯ ಕುರಿತು ಅಪಸ್ವರಗಳು ಕೇಳಿ ಬಂದಿವೆ. ಕಾನೂನು ಸಚಿವರೂ ಸಮಿತಿಗೆ ಮಾನ್ಯತೆ ಇಲ್ಲವೆಂದಿದ್ದಾರೆ. ಸದನದ ಘನತೆ ಎತ್ತಿ ಹಿಡಿಯಲು ಶ್ರಮಿಸಿದ ನಮ್ಮ ಹಿಂದಿನ ಮುತ್ಸದ್ದಿ ಸದಸ್ಯರಿಗೆ ಅಪಚಾರವೆಸಗಿದಂತಾಗುತ್ತದೆ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.