ADVERTISEMENT

ಬಿ.ಸಿ. ಪಾಟೀಲರಿಗೆ ಧೈರ್ಯ ತುಂಬಿದ ಸುತ್ತೂರು ಶ್ರೀ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2018, 17:45 IST
Last Updated 23 ಡಿಸೆಂಬರ್ 2018, 17:45 IST
   

ಹಿರೇಕೆರೂರು: ಸಚಿವ ಸ್ಥಾನ ಕೈತಪ್ಪಿದ ತಮಗೆ ಸುತ್ತೂರಿನ ಶಿವರಾತ್ರಿದೇಶಿ ಕೇಂದ್ರ ಶ್ರೀಗಳು ಧೈರ್ಯ ತುಂಬಿದ್ದಾಗಿ ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ ಅವರು ಹೇಳಿದ್ದಾರೆ.

‘ಇಂದು ಬೆಳಿಗ್ಗೆ ಸುತ್ತೂರು ಶ್ರೀಗಳು ಕರೆ ಮಾಡಿ, ನನಗೆ ಮಂತ್ರಿ ಪದವಿ ಸಿಗದೇ ಇದ್ದುದಕ್ಕೆ ವಿಷಾದ ವ್ಯಕ್ತಪಡಿಸಿದರು. ‘ಧೈರ್ಯಗೆಡಬೇಡಿ ನಿಮ್ಮೊಂದಿಗೆ ನಾವಿದ್ದೇವೆ’ ಎಂದು ಸಮಾಧಾನಿಸಿ ಧೈರ್ಯ ತುಂಬಿದರು. ಇಂಥ ಶ್ರೀಗಳು ಲಿಂಗಾಯತರಲ್ಲಿ ಬೇಕು’ ಎಂದು ಬರೆದಿರುವ ಸಂದೇಶವನ್ನು ‘ಕೌರವ ಪ್ರೆಸ್‌’ ಹೆಸರಿನ ವಾಟ್ಸ್‌ಆ್ಯಪ್‌ ಗ್ರೂಪ್‌ ಮೂಲಕ ಮಾಧ್ಯಮದವರಿಗೆ ಸಂಜೆ ತಿಳಿಸಿದ್ದಾರೆ.

ಸಚಿವ ಸ್ಥಾನ ಸಿಗದೇ ಹೋದುದಕ್ಕಾಗಿ ಅವರು ಶನಿವಾರ ಬೇಸರ ವ್ಯಕ್ತಪಡಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.