ADVERTISEMENT

ತಾಳ್ಮೆ ಬೆಳೆಸಿಕೊಳ್ಳಿ: ಡಿಕೆಶಿ ಸಲಹೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2020, 19:29 IST
Last Updated 15 ಜನವರಿ 2020, 19:29 IST
ಡಿ.ಕೆ. ಶಿವಕುಮಾರ್‌
ಡಿ.ಕೆ. ಶಿವಕುಮಾರ್‌   

ಹರಿಹರ: ಅಧಿಕಾರ ಹಾಗೂ ಮತಗಳಿಕೆಗಾಗಿ ಮಠಗಳನ್ನು ರಾಜಕಾರಣಿಗಳು ಬಳಸಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಸಮಾಜದ ಒಳಿತಿಗಾಗಿ ಅಧಿಕಾರದಲ್ಲಿ ಇರುವವರನ್ನು ಒತ್ತಾಯಿಸುವುದು ಸಹಜ. ಅಧಿಕಾರದಲ್ಲಿ ಇರುವವರು ಸ್ವಾಮೀಜಿಗಳ ಮಾತು ಕೇಳುವ ತಾಳ್ಮೆ ಬೆಳೆಸಿಕೊಳ್ಳಬೇಕು ಎಂದು ಶಾಸಕ ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿ ಹೆಸರೆತ್ತದೇ ಟೀಕೆ ಮಾಡಿದರು.

ಮುಖ್ಯಮಂತ್ರಿ ಬಳಿ ಸಮಾಜದ ಶಾಸಕರಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡಿ ಎಂದು 3 ಬಾರಿ ಮನವಿ ಮಾಡಿದರೂ, ಉತ್ತರಿಸದೇ ಉದಾಸೀನ ತೋರಿದರು. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸಭೆಯಲ್ಲಿ ಈ ವಿಚಾರವನ್ನು ಕೇಳಬೇಕಾಯಿತು.
–ವಚನಾನಂದ ಸ್ವಾಮೀಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT