ADVERTISEMENT

ಕರಡಿ ದಾಳಿ: ರೈತನಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2018, 20:00 IST
Last Updated 8 ನವೆಂಬರ್ 2018, 20:00 IST
ಕನಕಪುರ ತಾಲ್ಲೂಕಿನ ಕೆರೆಮೇಗಳದೊಡ್ಡಿ ಗ್ರಾಮದಲ್ಲಿ ಕರಡಿಗಳು ದಾಳಿ ನಡೆಸಿ ಹೊಟ್ಟೆ ಮತ್ತು ಮುಖದ ಭಾಗವನ್ನು ಕಿತ್ತು ಗಾಯಗೊಳಿಸಿರುವುದು
ಕನಕಪುರ ತಾಲ್ಲೂಕಿನ ಕೆರೆಮೇಗಳದೊಡ್ಡಿ ಗ್ರಾಮದಲ್ಲಿ ಕರಡಿಗಳು ದಾಳಿ ನಡೆಸಿ ಹೊಟ್ಟೆ ಮತ್ತು ಮುಖದ ಭಾಗವನ್ನು ಕಿತ್ತು ಗಾಯಗೊಳಿಸಿರುವುದು   

ಕನಕಪುರ: ಬೆಳಗಿನ ಜಾವ ಪಕ್ಕದ ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದ ರೈತನ ಮೇಲೆ ಎರಡು ಕರಡಿಗಳು ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿವೆ. ಕೆರೆಮೇಗಳದೊಡ್ಡಿ ಗ್ರಾಮದ ರಾಮಕೃಷ್ಣ (55) ಕರಡಿ ದಾಳಿಗೆ ತುತ್ತಾದ ರೈತ.

ಅಳ್ಳಿಮಾರನಹಳ್ಳಿ ಬಳಿ ಕರಡಿಗಳು ದಾಳಿ ನಡೆಸಿವೆ. ಅದೇ ರಸ್ತೆ ಮಾರ್ಗವಾಗಿ ಬಂದ ಬೈಕ್ ಸವಾರರೊಬ್ಬರು ಗಾಯಗೊಂಡ ರೈತನನ್ನು ಕನಕಪುರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT