ADVERTISEMENT

ಚಿತ್ರದುರ್ಗ: ಕರಡಿ ಓಡಿಸಲು ಮರಕ್ಕೆ ಬೆಂಕಿ ಹಚ್ಚಿದ ಗ್ರಾಮಸ್ಥರು 

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2018, 7:03 IST
Last Updated 15 ನವೆಂಬರ್ 2018, 7:03 IST
   

ಚಿತ್ರದುರ್ಗ: ಹೊಳಲ್ಕೆರೆ ತಾಲ್ಲೂಕಿನ ಹಿರೆಯಮ್ಮಿಗನೂರು ಗ್ರಾಮಸ್ಥರು ಕರಡಿ ಓಡಿಸಲು ಮರಕ್ಕೆ ಬೆಂಕಿ ಹಚ್ಚಿದ್ದಾರೆ. ಬೆಂಕಿ ತಗುಲಿ ಕರಡಿ ಗಾಯಗೊಂಡಿದೆ.

ಬುಧವಾರ ಸಂಜೆ ಗ್ರಾಮದ ಹೊರವಲಯದಲ್ಲಿ ಕರಡಿ ಕಾಣಿಸಿಕೊಂಡಿದೆ. ತಪ್ಪಿಸಿಕೊಳ್ಳುವ ಭರದಲ್ಲಿ ಮರವೇರಿದೆ. ಮಾಹಿತಿ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಕ್ಕೆ ಬಂದು ರಕ್ಷಣೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.ಕೆಲ

ಗ್ರಾಮಸ್ಥರು ಕರಡಿ ಏರಿದ್ದ ಮರಕ್ಕೆ ಬೆಂಕಿ ಹಚ್ಚಿದ್ದಾರೆ. ಮರದ ಬುಡದ ಕೆಳಗೆ ಇದ್ದ ಪೊದೆಗಳು ಉರಿಯತೊಡಗಿವೆ. ಬೆಂಕಿ ಕಂಡು ಗಾಬರಿಗೊಂಡ ಕರಡಿ ಮರದ ತುದಿಗೆ ಏರಿದೆ. ಉದ್ದದ ಕೋಲಿಗೆ ಬೆಂಕಿ ಹಚ್ಚಿ ಕರಡಿಗೆ ತೂರಿದ್ದಾರೆ.

ADVERTISEMENT

ಬೆಂಕಿ ತಗುಲಿ ಕರಡಿ ಪರದಾಡುವುದನ್ನು ಕಂಡು ಗ್ರಾಮಸ್ಥರು ಕೇಕೆ ಹಾಕಿದ್ದಾರೆ. ಬೆಂಕಿ ನಂದಿಸಿಕೊಂಡ ಕರಡಿ ಅಸ್ವಸ್ಥಗೊಂಡಿದೆ. ಇದನ್ನು ಗ್ರಾಮಸ್ಥರು ವಿಡಿಯೊ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.