ADVERTISEMENT

Watch: ರಾಜ್ಯದಲ್ಲಿ ಭಾರತ್ ಬಂದ್ ಹೇಗಿದೆ?

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2020, 6:54 IST
Last Updated 8 ಡಿಸೆಂಬರ್ 2020, 6:54 IST

ರಾಜ್ಯದ ಬಹುತೇಕ ಕಡೆ ಬೆಳಿಗ್ಗೆ ಎಂದಿನಂತೆಯೇ ವಾಹನಗಳ ಸಂಚಾರ, ವ್ಯಾಪಾರ ವಹಿವಾಟು ನಡೆಯಿತು. ಆದರೆ, ಸೂರ್ಯನ ಬಿಸಿಲು ಕಾವೇರುತ್ತಿದ್ದಂತೆ ಪ್ರತಿಭಟನೆಗಳು ಜೋರಾದವು. ರೈತ ಸಂಘಟನೆಗಳು, ವಿಪಕ್ಷಗಳು ಪ್ರತಿಭಟನಾ ಮೆರವಣಿಗೆಯನ್ನೂ ನಡೆಸಿದವು. ಅಣಕು ಶವಯಾತ್ರೆ, ರಸ್ತೆ ತಡೆಗಳು ನಡೆದವು. ಕೆಲವು ಭಾಗಗಳಲ್ಲಿ ಅಂಗಡಿಗಳು, ಹೋಟೆಲ್‌ಗಳನ್ನು ಮುಚ್ಚುವ ಮೂಲಕ ಭಾರತ್‌ ಬಂದ್‌ಗೆ ಬೆಂಬಲ ನೀಡಲಾಯಿತು. ಬಸ್‌ಗಳ ಓಡಾಟಕ್ಕೂ ಅಡಚಣೆ ಎದುರಾಯಿತು. ಪರಿಸ್ಥಿತಿ ನಿಯಂತ್ರಿಸಲು ಜಿಲ್ಲೆಗಳ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಹಲವು ಮುಖಂಡರು ಪ್ರತಿಕ್ರಿಯಿಸಿ, 'ರಾಜಕೀಯ ಕಾರಣಗಳಿಗಾಗಿ ಹೋರಾಟ ನಡೆಸಲಾಗುತ್ತಿದೆ; ಇದಕ್ಕೆ ಜನರ ಬೆಂಬಲ ಇಲ್ಲ' ಎಂದಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.