ADVERTISEMENT

ಚಾಮರಾಜನಗರಕ್ಕೆ ಶ್ರೀನಿವಾಸ ಪ್ರಸಾದ್‌?

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2019, 20:39 IST
Last Updated 14 ಮಾರ್ಚ್ 2019, 20:39 IST
   

ಬೆಂಗಳೂರು: ಚಾಮರಾಜನಗರದಿಂದ ಮಾಜಿ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಹಾಗೂ ಬಳ್ಳಾರಿಯಿಂದ ಕಾಂಗ್ರೆಸ್‌ ಶಾಸಕ ರಮೇಶ ಜಾರಕಿಹೊಳಿ ಸಂಬಂಧಿ ದೇವೇಂದ್ರಪ್ಪ ಅವರನ್ನು ಕಣಕ್ಕೆ ಇಳಿಸಲು ಬಿಜೆಪಿ ತಯಾರಿ ನಡೆಸಿದೆ.

ಚಾಮರಾಜನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಆರ್‌.ಧ್ರುವನಾರಾಯಣ್ ಎರಡು ಸಲ ಗೆದ್ದಿದ್ದಾರೆ. ಈ ಸಲ ಅವರಿಗೆ ಪ್ರಬಲ ಪ್ರತಿಸ್ಪರ್ಧೆ ನೀಡಬೇಕಾದರೆ ಮಾಜಿ ಸಚಿವ ಹಾಗೂ ಸಂಸದ ಶ್ರೀನಿವಾಸ ಪ್ರಸಾದ್‌ ಅವರೇ ಕಣಕ್ಕೆ ಇಳಿಯಬೇಕು ಎಂಬುದು ಜಿಲ್ಲಾ ಘಟಕದ ನಾಯಕರ ಅಭಿಮತ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸಿ.ಪಿ.ಯೋಗೀಶ್ವರ ಕಣಕ್ಕೆ ಇಳಿಸುವುದು ನಾಯಕರ ಆಲೋಚನೆ. ಚುನಾವಣಾ ವೆಚ್ಚ ನೋಡಿಕೊಂಡರೆ ಸ್ಪರ್ಧೆಗೆ ಸಿದ್ಧ ಎಂದು ಯೋಗೀಶ್ವರ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.