ಕಾರವಾರ: ನಗರ ಸಮೀಪದ ಅರಬ್ಬಿ ಸಮುದ್ರದಲ್ಲಿ ದೋಣಿಯೊಂದು ಮುಳುಗಿದೆ. ಎಂಟು ಶವಗಳು ಪತ್ತೆಯಾಗಿವೆ. ದೋಣಿಯಲ್ಲಿ 22 ಜನ ಇದ್ದರು ಎಂದು ಚಾಲಕ ತಿಳಿಸಿದ್ದಾನೆ.
ಸಮುದ್ರ ಮಧ್ಯದಲ್ಲಿರುವ ಕೂರ್ಮಗಡ ದ್ವೀಪದಲ್ಲಿ ಸೋಮವಾರ ನರಸಿಂಹ ದೇವರ ಜಾತ್ರೆಯಿತ್ತು. ಅದಕ್ಕೆ ಬಂದ ಭಕ್ತರು ಕಾರವಾರಕ್ಕೆ ವಾಪಸಾಗುತ್ತಿದ್ದಾಗ ದುರಂತ ಸಂಭವಿಸಿದೆ. ದ್ವೀಪವು ಕಡಲತೀರದಿಂದ ಸುಮಾರು ಆರು ಕಿ.ಮೀ ದೂರದಲ್ಲಿದ್ದು, ಅದರ ಸಮೀಪದಲ್ಲೇ ದೋಣಿ ಮುಳುಗಿದೆ.
ಸದ್ಯ ಶೋಧಕಾರ್ಯಾಚರಣೆ ಮುಂದುವರಿದಿದ್ದು, 12 ಮಂದಿಯನ್ನು ಪತ್ತೆ ಹಚ್ಚಿದ್ದಾರೆ. ಅವರ ಪೈಕಿ 8 ಮಂದಿ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ನಕುಲ್, ಎಸ್.ಪಿ.ವಿನಾಯಕ ಪಾಟೀಲ, ಕರಾವಳಿ ಕಾವಲು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.