ADVERTISEMENT

ನನ್ನ ಜಾಗದಲ್ಲಿ ನೀವು ಇದ್ರೆ ಏನು ಮಾಡ್ತಿದ್ರಿ?: ಬಿ.ಎಸ್‌. ಯಡಿಯೂರಪ್ಪ 

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 9:46 IST
Last Updated 23 ಫೆಬ್ರುವರಿ 2021, 9:46 IST
ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ    

ಬೆಂಗಳೂರು: ‘ನನ್ನ ಜಾಗದಲ್ಲಿ ನೀವು ಇದ್ದಿದ್ದರೆ ಏನ್ರಿ ಮಾಡ್ತಿದ್ರಿ? ಕೆಲಸಗಾರರು ನಮ್ಮನ್ನು ಹೇಳಿ – ಕೇಳಿ ಬೆಳಗ್ಗಿನ ಜಾವ ಆ ಸ್ಥಳಕ್ಕೆ ಅವರು ಹೋಗಿದ್ದರಾ?

ಸರ್ಕಾರ ಜಿಲೆಟಿನ್‌ ಸ್ಫೋಟ ತಡೆಯುವುದಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮೇಲಿನಂತೆ ಸಿಡಿಮಿಡಿಗೊಂಡು ಉತ್ತರಿಸಿದರು.

ದುರ್ಘಟನೆಯಲ್ಲಿ ಸತ್ತಿರುವ ಕುಟುಂಬಗಳ ಬಗ್ಗೆ ಅನುಕಂಪ ಇರಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ವಿರೋಧ ಪಕ್ಷದಲ್ಲಿರುವ ಸಿದ್ದರಾಮಯ್ಯ ಅವರಿಗೆ ಟೀಕೆ ಮಾಡುವುದು ಬಿಟ್ಟು ಬೇರೆ ಏನು ಕೆಲಸ ಇದೆ ಹೇಳಿ ಎಂದು ಅವರು ಪ್ರಶ್ನಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.