ADVERTISEMENT

ಮನೆಯಂಗಳದಲ್ಲಿ ಹೆತ್ತವರ ಪುತ್ಥಳಿ ನಿರ್ಮಿಸಿದ ಪುತ್ರರು

ನಿರಗುಡಿ ಪಾತ್ರೆ ಕುಟುಂಬದ ಮಾದರಿ ಕಾರ್ಯ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 19:41 IST
Last Updated 25 ಜನವರಿ 2021, 19:41 IST
ಆಳಂದ ತಾಲ್ಲೂಕಿನ ನಿರಗುಡಿ ಗ್ರಾಮದಲ್ಲಿ ಜಗನ್ನಾಥ ಪಾತ್ರೆ ಸಹೋದರರು ದಿ.ವಿಶ್ವನಾಥ ಪಾತ್ರೆ ಹಾಗೂ ದಿ.ಲಕ್ಷ್ಮಿಬಾಯಿ ಪಾತ್ರೆ ಅವರ ಪುತ್ಥಳಿ ಪ್ರತಿಷ್ಠಾಪಿಸಿರುವುದು
ಆಳಂದ ತಾಲ್ಲೂಕಿನ ನಿರಗುಡಿ ಗ್ರಾಮದಲ್ಲಿ ಜಗನ್ನಾಥ ಪಾತ್ರೆ ಸಹೋದರರು ದಿ.ವಿಶ್ವನಾಥ ಪಾತ್ರೆ ಹಾಗೂ ದಿ.ಲಕ್ಷ್ಮಿಬಾಯಿ ಪಾತ್ರೆ ಅವರ ಪುತ್ಥಳಿ ಪ್ರತಿಷ್ಠಾಪಿಸಿರುವುದು   

ಆಳಂದ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ನಿರಗುಡಿ ಗ್ರಾಮದಲ್ಲಿ ಮೂವರುಪುತ್ರರು ತಮ್ಮ ಮನೆ ಅಂಗಳದಲ್ಲಿ ತಂದೆ–ತಾಯಿಯ ಪುತ್ಥಳಿ ಪ್ರತಿಷ್ಠಾಪಿಸಿದ್ದಾರೆ.

₹2 ಲಕ್ಷ ವೆಚ್ಚಮಾಡಿದಿ.ವಿಶ್ವನಾಥ ಪಾತ್ರೆ ಹಾಗೂ ದಿ.ಲಕ್ಷ್ಮಿಬಾಯಿ ಪಾತ್ರೆ ಅವರ ಪುತ್ಥಳಿ ನಿರ್ಮಿಸಿದ್ದು,ಭಾನುವಾರ ಅನಾವರಣ ಕಾರ್ಯಕ್ರಮ ನಡೆಯಿತು.

ವಿಶ್ವನಾಥ ಪಾತ್ರೆ ಅವರ ಹಿರಿಯ ಪುತ್ರ ಜಗನ್ನಾಥ ಗ್ರಾಮ ಪಂಚಾಯಿತಿ ಸದಸ್ಯರಾದರೆ, ಇನ್ನೊಬ್ಬ ಪುತ್ರ ದಶರಥ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ. ಕೊನೆಯ ಪುತ್ರ ಧನರಾಜ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.