ADVERTISEMENT

ಕ್ಯಾನ್ಸರ್‌ ಔಷಧಿಗಳಿಗೆ ಸುಂಕ ವಿನಾಯಿತಿ: ಹಣಕಾಸು ಸಚಿವರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 15:48 IST
Last Updated 21 ಆಗಸ್ಟ್ 2025, 15:48 IST
ನಿರ್ಮಲಾ ಸೀತಾರಾಮನ್‌ ಅವರಿಗೆ ಡಾ.ಸಿ.ಎನ್.ಮಂಜುನಾಥ್‌ ಮಾಹಿತಿ ನೀಡಿದರು. 
ನಿರ್ಮಲಾ ಸೀತಾರಾಮನ್‌ ಅವರಿಗೆ ಡಾ.ಸಿ.ಎನ್.ಮಂಜುನಾಥ್‌ ಮಾಹಿತಿ ನೀಡಿದರು.     

ನವದೆಹಲಿ: ಬಡವರಿಗೆ ಕೈಗೆಟಕುವ ದರದಲ್ಲಿ ಕ್ಯಾನ್ಸರ್‌ ಚಿಕಿತ್ಸೆ ಒದಗಿಸಲು ಇಮ್ಯುನೋಥೆರಪಿಗೆ ಬಳಸುವ ಔಷಧಿಗಳು ಹಾಗೂ ರೇಡಿಯೋಥೆರಪಿ ಉಪಕರಣಗಳಿಗೆ ಕಸ್ಟಮ್ಸ್‌ ಸುಂಕ ವಿನಾಯಿತಿ ನೀಡಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್‌.ಮಂಜುನಾಥ್‌ ಮನವಿ ಮಾಡಿದರು. 

ಪ್ರಸ್ತುತ ಇಮ್ಯುನೋಥೆರಪಿ ಚಿಕಿತ್ಸೆಗೆ ₹20 ಲಕ್ಷದಿಂದ ₹50 ಲಕ್ಷ ಖರ್ಚಾಗುತ್ತಿದೆ. ಸುಂಕ ವಿನಾಯಿತಿ ನೀಡಿದರೆ ಕ್ಯಾನ್ಸರ್‌ ಚಿಕಿತ್ಸಾ ವೆಚ್ಚ ಕಡಿಮೆಯಾಗಲಿದೆ. ಇದರಿಂದ ಲಕ್ಷಾಂತರ ರೋಗಿಗಳಿಗೆ ಅನುಕೂಲ ಆಗಲಿದೆ ಎಂಬುದನ್ನು ಅವರು ಸಚಿವರ ಗಮನಕ್ಕೆ ತಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT