ADVERTISEMENT

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನ: ಸಾಗರದ ಆಗಮ ಕೀರ್ತಿ ಉತ್ತರಾಧಿಕಾರಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2023, 23:54 IST
Last Updated 23 ಮಾರ್ಚ್ 2023, 23:54 IST
ಶ್ರವಣಬೆಳಗೊಳ ಜೈನಮಠದ ಉತ್ತರಾಧಿಕಾರಿ ಆಗಮ ಕೀರ್ತಿ.
ಶ್ರವಣಬೆಳಗೊಳ ಜೈನಮಠದ ಉತ್ತರಾಧಿಕಾರಿ ಆಗಮ ಕೀರ್ತಿ.   

ಶ್ರವಣಬೆಳಗೊಳ: ಜೈನ ಮಠದ ಉತ್ತರಾಧಿಕಾರಿಯಾಗಿ ಶಿವಮೊಗ್ಗ ಜಿಲ್ಲೆಯ ಸಾಗರದ ಆಗಮ ಕೀರ್ತಿ ಅವರನ್ನು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಾಲ್ಕು ತಿಂಗಳ ಹಿಂದೆಯೇ ನೇಮಿಸಿದ್ದರು.

ಎರಡು ದಿನದ ಹಿಂದಷ್ಟೇ ಕ್ಷೇತ್ರದ ಹಿರಿಯರನ್ನು ಮಠಕ್ಕೆ ಕರೆಸಿದ್ದ ಸ್ವಾಮೀಜಿ, ‘ಆಗಮ ಕೀರ್ತಿಗ ಳನ್ನು ಉತ್ತರಾಧಿಕಾರಿಯಾಗಿ ನೇಮಿಸ
ಲಾಗಿದೆ. ನನ್ನ ಆರೋಗ್ಯ ಸರಿ ಉಳಿ ಯುತ್ತಿಲ್ಲ. ಹೀಗಾಗಿ ಅವರನ್ನೇ ಮುಂದುವರಿಸಬೇಕು’ ಎಂದು ತಿಳಿಸಿದ್ದರು. ‘ಆಗಮ ಕೀರ್ತಿ ಅವರನ್ನು ಉತ್ತರಾಧಿಕಾರಿಯಾಗಿ ಮಾಡಲಾಗುತ್ತಿದ್ದು, ಪಟ್ಟಾಧಿಕಾರ ಮಹೋತ್ಸವ ಮುಂದಿನ ದಿನಗಳಲ್ಲಿ ನಡೆಯಲಿದೆ’ ಎಂದು ಮಠದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT