ಬೆಂಗಳೂರು:ಎಪಿಎಂಸಿ ಮಂಡಿಗಳಲ್ಲಿ ವಿಧಿಸುತ್ತಿರುವ ಶುಲ್ಕವನ್ನು ಶೇ.1.5 ರಿಂದ ಶೇ 0.5 ವಿಧಿಸಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಆಶ್ವಾಸನೆ ನೀಡಿರುವುದಾಗಿ ಎಫ್ಕೆಸಿಸಿಐ ಅಧ್ಯಕ್ಷ ಸಿ.ಆರ್.ಜನಾರ್ಧನ ಹೇಳಿದ್ದಾರೆ.
ಶನಿವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು, ಎಫ್ಕೆಸಿಸಿಐ ವತಿಯಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ವಿವರಿಸಲಾಯಿತು. ಹಾಲಿ ಚಾಲ್ತಿಯಲ್ಲಿರುವ ಸೆಸ್ ಅನ್ನು ಶೇ.1.5 ರಿಂದ ಶೇ.0.5ಗೆ ಇಳಿಸಲು ಎಫ್ಕೆಸಿಸಿಐ ಮಹಾಸಂಸ್ಥೆ,ಎಪಿಎಂಸಿ ಉಪ ಸಮಿತಿಯ ಅಧ್ಯಕ್ಷರಾದ ಆರ್ ಸಿ ಲಹೋಠಿ, ನಿರ್ದೇಶಕಟಿ. ಸಾಯಿರಾಂ ಪ್ರಸಾದ್ ಮನವಿ ಸಲ್ಲಿಸಿ ಒತ್ತಾಯಿಸಿದರು.
ಸರ್ಕಾರವು ಎಪಿಎಂಸಿ ಕಾಯಿದೆಗೆ ಅಗತ್ಯ ತಿದ್ದುಪಡಿ ತಂದು ಎಪಿಎಂಸಿ ಪ್ರಾಂಗಣದ ಒಳಗೆ ಹಾಗೂ ಹೊರಗೆ ವ್ಯತ್ಯಾಸದ ಶುಲ್ಕಗಳನ್ನು ಸರಿಪಡಿಸಲುಕೋರಲಾಯಿತು.ಮುಖ್ಯಮಂತ್ರಿಗಳು ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವುದಾಗಿ ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.