ADVERTISEMENT

ತಿಂಗಳ ಕೊನೆಗೆ ರೈತರ ಕೈಸೇರಲಿದೆ ಋಣಮುಕ್ತ ಪತ್ರ : ಬಂಡೆಪ್ಪ ಕಾಶೆಂಪುರ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2018, 9:12 IST
Last Updated 9 ನವೆಂಬರ್ 2018, 9:12 IST
ಬಂಡೆಪ್ಪ ಕಾಶೆಂಪುರ
ಬಂಡೆಪ್ಪ ಕಾಶೆಂಪುರ   

ಬೆಂಗಳೂರು: ಸಹಕಾರ ಬ್ಯಾಂಕ್‌ಗಳಿಂದ ಸಾಲ ಪಡೆದಿರುವ ₹2.20 ಲಕ್ಷ ರೈತರು ಮಾಹಿತಿ ನೀಡಿದ್ದು, ಈ ತಿಂಗಳ ಕೊನೆಗೆ ಅವರಿಗೆ ಋಣ ಮುಕ್ತ ಪತ್ರ ನೀಡುತ್ತೇವೆ ಎಂದು ಸಹಕಾರ ಸಚಿವಬಂಡೆಪ್ಪ ಕಾಶೆಂಪುರತಿಳಿಸಿದರು.

ಹೀಗೆ ಹಕ್ಕು ಮಂಡಿಸಿರುವ ರೈತರ ಸಾಲದಒಟ್ಟು ಮೊತ್ತ ₹1,050ಕೋಟಿ ಆಗುತ್ತದೆ ಎಂದು ಹೇಳಿದರು.

ಬಡವರ ಬಂಧು ಕಿರು ಕಾಲ ಸಾಲ ಯೋಜನೆಗೆ ಇದೇ 22ರಂದು ಚಾಲನೆ ನೀಡಲಾಗುವುದು. ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಈ ಯೋಜನೆ 50 ಸಾವಿರ ವ್ಯಾಪಾರಿಗಳಿಗೆ ಪ್ರಯೋಜನವಾಗಲಿದೆ ಎಂದು ವಿವರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.