ಮತದಾನದ ಹಕ್ಕು ಚಲಾಯಿಸಿದರೆ ದೇಶದಲ್ಲಿ ನಮ್ಮ ಇರುವಿಕೆಗೆ ಮಹತ್ವ ಬರುತ್ತದೆ. ಹಾಗಾಗಿ, ಸದೃಢ ಸರ್ಕಾರ ರಚನೆಗೆ ನಿಮ್ಮ ಕೊಡುಗೆ ನೀಡಿ. ನಮ್ಮ ಒಂದು ಮತಕ್ಕೆ ದೇಶದ ಭವಿಷ್ಯವನ್ನು ಹಾಳು ಮಾಡುವ ಅಥವಾ ಉದ್ಧಾರ ಮಾಡುವ ಸಾಮರ್ಥ್ಯವಿದೆ. ಉತ್ತಮ ಅಭ್ಯರ್ಥಿಗೆ ಮತ ಹಾಕಿದರೆ ದೇಶ ಕಟ್ಟುವ ಕೆಲಸವಾಗುತ್ತದೆ. ವಿವೇಚನೆಯಿಲ್ಲದೇ ಮತ ಚಲಾಯಿಸಬೇಡಿ.
ಮಹಾನಗರಗಳಲ್ಲಿರುವ ಬಹುತೇಕ ಐ.ಟಿ. ಹಾಗೂ ಬಿ.ಟಿ ಕ್ಷೇತ್ರದ ಉದ್ಯೋಗಿಗಳು ಮತಗಟ್ಟೆಯಿಂದ ದೂರವೇ ಉಳಿಯುತ್ತಾರೆ.ಸರ್ಕಾರ, ಅಂಥ ಮತದಾರರ ಗುರುತಿನ ಚೀಟಿಯನ್ನು ರದ್ದುಗೊಳಿಸುವ ನೀತಿ ರೂಪಿಸಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.