ADVERTISEMENT

ಆಮ್ ಆದ್ಮಿ ಪಕ್ಷ ಸೇರಿದ ಹಾಸ್ಯ ನಟ ಟೆನ್ನಿಸ್‌ ಕೃಷ್ಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಆಗಸ್ಟ್ 2022, 9:51 IST
Last Updated 4 ಆಗಸ್ಟ್ 2022, 9:51 IST
ಟಿನ್ನಿಸ್ ಕೃಷ್ಣ
ಟಿನ್ನಿಸ್ ಕೃಷ್ಣ    

ಬೆಂಗಳೂರು: ಚಂದನವನದ ಹಾಸ್ಯ ನಟಟಿನ್ನಿಸ್ ಕೃಷ್ಣ ಅವರುಗುರುವಾರ ಅಧಿಕೃತವಾಗಿಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಸೇರ್ಪಡೆಯಾಗಿದ್ದಾರೆ.

ಪಂಜಾಬ್‌ ಮತ್ತು ದೆಹಲಿಯಲ್ಲಿ ಸರ್ಕಾರ ರಚನೆ ಮಾಡಿರುವ ಎಎಪಿಗೆ ಅವರನ್ನು ಪಕ್ಷದರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಬರಮಾಡಿಕೊಂಡರು.

ಪಕ್ಷಕ್ಕೆ ಸೆರ್ಪಡೆಯಾದ ಬಳಿಕಟೆನ್ನಿಸ್‌ ಕೃಷ್ಣ ಮಾತನಾಡಿ ‘ಅಧಿಕಾರಕ್ಕಾಗಿ ಪಕ್ಷಕ್ಕೆ ಸೇರಿಲ್ಲ. ಜನಸೇವೆಗಾಗಿ ಸೇರಿದ್ದೇನೆ’ ಎಂದು ಹೇಳಿದರು. ಈ ಹಿಂದೆ ಮತ್ತೊಬ್ಬ ಹಾಸ್ಯನಟ ಮುಖ್ಯಮಂತ್ರಿ ಚಂದ್ರು ಕೂಡ ಎಎಪಿ ಸೇರಿದ್ದಾರೆ.

ADVERTISEMENT

ಇಲ್ಲಿನ ಖಾಸಗಿ ಹೊಟೇಲ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಪೃಥ್ವಿ ರೆಡ್ಡಿ ಸೇರಿದಂತೆ ಪಕ್ಷದ ಅನೇಕ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.