ADVERTISEMENT

ಕಾಂಗ್ರೆಸ್ ರಾವಣರ ಪಾರ್ಟಿ: ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 11:15 IST
Last Updated 28 ನವೆಂಬರ್ 2019, 11:15 IST
   

ಹೊಸಪೇಟೆ: ‘ಕಾಂಗ್ರೆಸ್ ರಾವಣರ ಪಾರ್ಟಿ ಇದ್ದ ಹಾಗೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕಿಸಿದರು.

ಗುರುವಾರ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ವಿಜಯನಗರ ಕ್ಷೇತ್ರದ ಉಪಚುನಾವಣೆ ನಿಮಿತ್ತ ಆಯೋಜಿಸಿದ್ದ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

‘ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಪಕ್ಷಾಂತರ ಮಾಡಿದವನು ವಿಭೀಷಣ. ನಂತರ ಅವನು ರಾವಣನ ಪಕ್ಷದಿಂದ ರಾಮನ ಪಕ್ಷಕ್ಕೆ ಬಂದ. ಹಾಗೆಯೇ ವಿಜಯನಗರ ವಿಧಾನಸಭಾ ಕ್ಷೇತ್ರ ಕರ್ನಾಟಕದ ರಾಮರಾಜ್ಯವಾಗಬೇಕು. ಕಲ್ಯಾಣ ಕರ್ನಾಟಕವಾಗಬೇಕು ಎನ್ನುವ ಉದ್ದೇಶದಿಂದ ಆನಂದ್‍ ಸಿಂಗ್ ರಾವಣರ ಪಾರ್ಟಿ ಬಿಟ್ಟು ರಾಮನ ಪಾರ್ಟಿಯಾದ ಬಿಜೆಪಿಗೆ ಬಂದಿದ್ದಾರೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.