ADVERTISEMENT

ಕಾಂಗ್ರೆಸ್‌ನದ್ದು ಭಾರತ ಒಡೆಯುವ ಯಾತ್ರೆ: ಬಿ.ಸಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 10:02 IST
Last Updated 30 ಸೆಪ್ಟೆಂಬರ್ 2022, 10:02 IST
ಬಿ.ಸಿ.ಪಾಟೀಲ
ಬಿ.ಸಿ.ಪಾಟೀಲ   

ಮೈಸೂರು: ‘ಕಾಂಗ್ರೆಸ್‌ನವರದ್ದು ಭಾರತ ಒಡೆಯುವ ಯಾತ್ರೆಯೇ ಹೊರತು ಜೋಡಿಸುವ ಉದ್ದೇಶದ್ದಲ್ಲ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಟೀಕಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಮೊದಲು ಕಾಂಗ್ರೆಸ್ ಜೋಡಣೆ ಮಾಡಿಕೊಳ್ಳಲಿ’ ಎಂದು ವ್ಯಂಗ್ಯವಾಡಿದರು.

‘ಒಂದಾಗಿದ್ದ ಭಾರತವನ್ನು ಒಡೆದವರೇ ಕಾಂಗ್ರೆಸ್‌ನವರು. ಈ ಯಾತ್ರೆಯಿಂದ ಆ ಪಕ್ಷದಲ್ಲೇ ಮತ್ತಷ್ಟು ಕಂದಕ ಸೃಷ್ಟಿಯಾಗುತ್ತದೆ. ಇದರಿಂದ ಅವರಿಗೆ ಯಾವುದೇ ರಾಜಕೀಯ ಲಾಭ ಆಗುವುದಿಲ್ಲ. ಜನರಿಗೆ ಎಲ್ಲವೂ ಗೊತ್ತಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.