ADVERTISEMENT

Covid-19 Karnataka Update | ರಾಜ್ಯದಲ್ಲಿ 5,503 ಪ್ರಕರಣ ದೃಢ, 92 ಜನ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಜುಲೈ 2020, 18:30 IST
Last Updated 29 ಜುಲೈ 2020, 18:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:ರಾಜ್ಯದಲ್ಲಿ ಮತ್ತೆ 5,503 ಮಂದಿ ಕೋವಿಡ್ ಪೀಡಿತರಾಗಿರುವುದುಬುಧವಾರ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1,12,504ಕ್ಕೆ ತಲುಪಿದೆ.

ಕೊರೊನಾ ಸೋಂಕಿತರಲ್ಲಿ ಮತ್ತೆ 92 ಮಂದಿ ಮೃತಪಟ್ಟಿರುವುದು ಖಚಿತವಾಗಿದೆ. ಇದರಿಂದಾಗಿ ಕೋವಿಡ್‌ಗೆ ಸಾವಿಗೀಡಾದವರ ಸಂಖ್ಯೆ 2,147ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕೇವಲ 48 ಗಂಟೆಗಳಲ್ಲಿ 11,039 ಮಂದಿ ಕೋವಿಡ್ ಪೀಡಿತರಾಗಿರುವುದು
ದೃಢಪಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 67 ಸಾವಿರ ದಾಟಿದೆ. ಒಂದೇ ದಿನ 16,995 ಆ್ಯಂಟಿಜೆನ್→ಸೇರಿದಂತೆ 32,990 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ.

ಬೆಂಗಳೂರಿನಲ್ಲಿ 1,118 ಸೇರಿದಂತೆ ರಾಜ್ಯದಲ್ಲಿ 2,397 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿ
ದ್ದಾರೆ. ಬೆಂಗಳೂರಿನಲ್ಲಿ ಮತ್ತೆ 2,270 ಮಂದಿ ಸೋಂಕಿತರಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 50 ಸಾವಿರದ ಗಡಿ (51,091) ದಾಟಿದೆ.

ADVERTISEMENT

ಬಳ್ಳಾರಿಯಲ್ಲಿ ಕೂಡ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಮತ್ತೆ 338 ಮಂದಿ ಸೋಂಕಿತರಾಗಿದ್ದಾರೆ. ಬೆಳಗಾವಿ (279), ದಾವಣಗೆರೆ (225), ದಕ್ಷಿಣ ಕನ್ನಡ (208), ಮೈಸೂರು (200), ಧಾರವಾಡ (175), ಉಡುಪಿ (173), ಕಲಬುರ್ಗಿ (168), ಶಿವಮೊಗ್ಗ (131), ತುಮಕೂರು (128), ಯಾದಗಿರಿ (114) ಜಿಲ್ಲೆಯಲ್ಲಿಯೂ ಅಧಿಕ ಪ್ರಕರಣಗಳು ಹೊಸದಾಗಿ ದೃಢಪಟ್ಟಿವೆ.

ಬುಧವಾರ ಖಚಿತಪಟ್ಟ ಮರಣ ಪ್ರಕರಣಗಳಲ್ಲಿ 16 ಮಂದಿ 50 ವರ್ಷದೊಳಗಿನವರಾಗಿದ್ದಾರೆ. ಇದರಲ್ಲಿಧಾರವಾಡದ 26 ವರ್ಷದ ಯುವತಿ, ಬೆಂಗಳೂರಿನ 30 ವರ್ಷದ ಮಹಿಳೆ ಕೂಡ ಇದ್ದಾರೆ. ಬೆಂಗಳೂರು (30), ಕಲಬುರ್ಗಿ (10), ಧಾರವಾಡ (7), ದಕ್ಷಿಣ ಕನ್ನಡ (7), ಮೈಸೂರು (5) ಜಿಲ್ಲೆಯಲ್ಲಿ ಅಧಿಕ ಮಂದಿ ಮೃತಪಟ್ಟಿದ್ದಾರೆ.

*****

ರಾಜ್ಯದ ಕೋವಿಡ್ ಅಂಕಿ–ಅಂಶ

1,12,504 ಒಟ್ಟು ಸೋಂಕಿತರು

ಬುಧವಾರ ದೃಢಪಟ್ಟ ಪ್ರಕರಣಗಳು; 5,503

ಸಕ್ರಿಯ ಪ್ರಕರಣಗಳು; 67,448

ಗುಣಮುಖರಾದವರು; 42,901

ಬುಧವಾರ ಗುಣಮುಖರಾದವರು; 2,397

ಒಟ್ಟು ಮೃತಪಟ್ಟವರು; 2,147

ಬುಧವಾರ ದೃಢಪಟ್ಟ ಸಾವು ಪ್ರಕರಣಗಳು; 92

ಐಸಿಯುನಲ್ಲಿ ಇರುವವರು; 639

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.