ADVERTISEMENT

Covid-19 Karnataka Updates: ರಾಜ್ಯದಲ್ಲಿಯೂ ಕೋವಿಡ್‌ ಏರಿಕೆಯ ಹಾದಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2021, 15:44 IST
Last Updated 11 ಮಾರ್ಚ್ 2021, 15:44 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವಂತೆಯೇ, ರಾಜ್ಯದಲ್ಲಿಯೂ ಸೋಂಕಿತರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಗುರುವಾರ ಹೊಸದಾಗಿ 783 ಜನರಿಗೆ ಕೋವಿಡ್‌ ದೃಢಪಟ್ಟಿದೆ.

ರಾಜ್ಯದಲ್ಲಿ ಈವರೆಗೂ ಕೊರೊನಾ ಲಸಿಕೆ ಪಡೆಯದ ಆರೋಗ್ಯ ಮತ್ತು ಮುಂಚೂಣಿ ಇಲಾಖೆಗಳ ಕಾರ್ಯಕರ್ತರಿಗೆ ಕೊರೊನಾ ಲಸಿಕೆ ಪಡೆಯಲು ಮತ್ತೊೊಮ್ಮೆೆ ಅವಕಾಶ ನೀಡಲಾಗಿದೆ. ಮೊದಲ ಹಂತದಲ್ಲಿ ಜನವರಿ 16 ರಿಂದ ಫೆ.25ವರೆಗೂ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆ ನೀಡಲಾಗಿತ್ತು.

ಫೆಬ್ರುವರಿಯಿಂದ ಮುಂಚೂಣಿ ಕಾರ್ಯಕರ್ತರಿಗೂ ಲಸಿಕೆ ಆರಂಭವಾಗಿತ್ತು. ಆದರೆ, ನೋಂದಣಿಯಾಗಿದ್ದ ಏಳು ಲಕ್ಷ ಆರೋಗ್ಯ ಕಾರ್ಯಕರ್ತರ ಪೈಕಿ ಈವರೆಗೂ 4.74 ಲಕ್ಷ ಮಂದಿ ಮಾತ್ರ ಲಸಿಕೆ ಪಡೆದಿದ್ದಾಾರೆ. ಅಂತೆಯೇ ನೋದಣಿಯಾಗಿರುವ ಮೂರು ಲಕ್ಷಕ್ಕೂ ಅಧಿಕ ಮುಂಚೂಣಿ ಕಾರ್ಯಕರ್ತರ ಪೈಕಿ 1.71 ಲಕ್ಷ ಮಂದಿ ಮಾತ್ರ ಲಸಿಕೆ ಪಡೆದಿದ್ದಾಾರೆ. ಹೀಗಾಗಿಯೇ, ಮತ್ತೊೊಮ್ಮೆೆ ಅವಕಾಶ ಕಲ್ಪಿಿಸಲಾಗಿದೆ. ‘ಲಸಿಕೆ ಪಡೆಯದ ಆರೋಗ್ಯ ಮುಂಚೂಣಿ ಕಾರ್ಯಕರ್ತರು ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ, ಖಾಸಗಿ ಆಸ್ಪತ್ರೆೆಯಲ್ಲಿ 250 ರೂ. ಶುಲ್ಕ ನೀಡಿ ಲಸಿಕೆ ಪಡೆಯಬುದು’ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾಾರೆ.

ADVERTISEMENT

7388 ಸಾರ್ವಜನಿಕರಿಗೆ ಲಸಿಕೆ
ಎರಡನೇ ಹಂತದ ಕೊರೊನಾ ಲಸಿಕೆ ಅಭಿಯಾನ 11ನೇ ದಿನವಾದ ಗುರುವಾರ 60 ವರ್ಷ ಮೇಲ್ಪಟ್ಟ 6169 ಹಿರಿಯ ನಾಗರೀಕರು, 45- 59 ವರ್ಷದ ಆರೋಗ್ಯ ಸಮಸ್ಯೆೆ ಹೊಂದಿರುವ 1,219 ಮಂದಿ ಸೇರಿ 7,388 ಸಾರ್ವಜನಿಕರು ಲಸಿಕೆ ಪಡೆದಿದ್ದಾಾರೆ. ಒಟ್ಟಾಾರೆ ಈವರೆಗೂ ರಾಜ್ಯದಲ್ಲಿ 2,10,827 ಹಿರಿಯ ನಾಗರೀಕರು, 36,869 ಮಂದಿ ಆರೋಗ್ಯ ಸಮಸ್ಯೆೆಯಿಂದ ಬಳಲುತ್ತಿಿರುವವರು ಲಸಿಕೆ ಪಡೆದಂತಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.