ಗೌರಿಬಿದನೂರು: ಡ್ರೋನ್ ಮೂಲಕ ಔಷಧಗಳನ್ನು ಪೂರೈಕೆ ಮಾಡುವ ಮೊಟ್ಟ ಮೊದಲ ಪ್ರಯೋಗಕ್ಕೆ ತಾಲ್ಲೂಕಿನ ಶಂಬೂಕನಗರದ ಬಳಿ ಚಾಲನೆ ನೀಡಲಾಯಿತು. ಡ್ರೋನ್ ಯಶಸ್ವಿ ಕಾರ್ಯಾರಂಭ ಮಾಡಿರುವುದು ಸಂತೋಷದ ವಿಚಾರ ಎಂದು ಡ್ರೋನ್ನ ನಿರ್ವಹಣೆ ಹಾಗೂ ಟಿಎಎಸ್ ಸಂಸ್ಥೆಯ ನಿರ್ದೇಶಕ ಗಿರೀಶ್ ರೆಡ್ಡಿ ತಿಳಿಸಿದರು.
ಗಿರೀಶ್ ರೆಡ್ಡಿಮಾತನಾಡಿ, ಡ್ರೋನ್ ಮೂಲಕ ಔಷಧ ಸಾಗಿಸುವ ದೇಶದ ಪ್ರಥಮ ಪ್ರಯೋಗ ಇದಾಗಿದೆ. ಸುಮಾರು 30-45 ದಿನದವರೆಗೆ ತಾಲ್ಲೂಕಿನಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುವುದು. ಅಧಿಕೃತವಾಗಿ ಸರ್ಕಾರದ ಅನುಮತಿಯ ಮೇರೆಗೆ ಜೂನ್ 21 ರ ಸೋಮವಾರ ಡ್ರೋನ್ ಉಡಾವಣೆಗೆ ಚಾಲನೆ ನೀಡಲಾಗಿದ್ದು ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿದೆ ಎಂದರು.
ಬೆಳಿಗ್ಗೆ 10 ಗಂಟೆಗೆ ಆರಂಭವಾದ ಡ್ರೋನ್ ಮೂಲಕ ಔಷಧ ರವಾನಿಸುವ ಪ್ರಾಯೋಗಿಕ ಹಂತವನ್ನು ಬೆಂಗಳೂರಿನ ಟಿಎಎಸ್ ಸಂಸ್ಥೆಯ ನೇತೃತ್ವದಲ್ಲಿ ಆನ್ಲೈನ್ ಮೂಲಕ ಪರೀಕ್ಷಿಸಲಾಗಿದೆ. ವಿಭಿನ್ನ ಹಾಗೂ ವಿನೂತನ ಪ್ರಯತ್ನ ಇದಾಗಿದ್ದು ಈ ಪ್ರಾಯೋಗಿಕ ಪರೀಕ್ಷೆಯು ಟಿಎಎಸ್ ಸಂಸ್ಥೆ ಹಾಗೂ ನಾರಾಯಣ ಆರೋಗ್ಯ ಸಂಸ್ಥೆಯ ಸಹಭಾಗಿತ್ವದಲ್ಲಿ ನಡೆದಿದೆ.
ಮೊದಲ ದಿನದಂದು ಸುಮಾರು 5 ಬಾರಿ ಡ್ರೋನ್ನ್ನು ಉಡಾವಣೆ ಮಾಡಲಾಗಿದ್ದು, ಒಟ್ಟು 2.5 ಕಿ.ಮೀ ದೂರ ಕ್ರಮಿಸಿದೆ ಎಂದರು.
ಸಂಸ್ಥೆಯ ಮುಖ್ಯಸ್ಥ ನಾಗೇಂದ್ರನ್ ಕಂದಸಾಮಿ, ಆರ್.ಶಶಿಕುಮಾರ್, ಎಂ.ನಿಶ್ಚಿತ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.