ರಾಮನಗರ:ಸುಮಲತಾ ಅಂಬರೀಷ್ ಗೆಲುವಿನ ಬೆನ್ನಲ್ಲೇ, ಅಭಿಮಾನಿಯೊಬ್ಬ ದರ್ಶನ್ ಅವರ ಮುಖವನ್ನು ಬೆನ್ನತುಂಬಾ ಟ್ಯಾಟು ಹಾಕಿಸಿಕೊಳ್ಳುವ ಮೂಲಕ ಅಭಿಮಾನ ಮೆರೆದಿದ್ದಾರೆ.
ಬಿಡದಿಯ ಕರೇನಹಳ್ಳಿ ನಿವಾಸಿ ಕಾರ್ತಿಕ್ ಎಂಬ ಯುವಕ ದರ್ಶನ್ ಭಾವಚಿತ್ರದ ಟ್ಯಾಟು ಹಾಕಿಸಿಕೊಂಡಿದ್ದಾರೆ.
ಕಲಾವಿದ ಮಧು, ದರ್ಶನ್ ಅವರನ್ನು ಚಿತ್ರಿಸಲು ಏಳು ಗಂಟೆ ತೆಗೆದುಕೊಂಡಿದ್ದಾರೆ. ಸುಮಲತಾ ಅಂಬರೀಷ್ ಪರವಾಗಿ ಪ್ರಚಾರ ಮಾಡಿದ್ದ ದರ್ಶನ್ ಅವರ ನೆನಪು ಸದಾ ಉಳಿಯಬೇಕು ಎಂಬ ಕಾರಣಕ್ಕೆ 30 ಸೆಂ.ಮೀ. ಉದ್ದ ಹಾಗೂ 16 ಸೆಂ.ಮೀ ಅಗಲದ ಟ್ಯಾಟು ಹಾಕಿಸಿಕೊಂಡಿದ್ದಾರೆ. ಅದರ ಅಡಿಯಲ್ಲಿ ಡಿ ಬಾಸ್ ಎಂದು ಬರೆಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.