ಕಾರವಾರ: ಇಲ್ಲಿನ ಕೂರ್ಮಗಡ ಸಮೀಪಅರಬ್ಬಿ ಸಮುದ್ರದಲ್ಲಿ ಸೋಮವಾರ ಸಂಭವಿಸಿದ ದೋಣಿ ದುರಂತದಲ್ಲಿ ಮೃತಪಟ್ಟ ಕೀರ್ತಿ ಸೋಮಪ್ಪ ಬೆಳವಲಕೊಪ್ಪ (7) ಎಂಬಾಕೆಯ ಮೃತದೇಹ ಬುಧವಾರ ಸಿಕ್ಕಿದೆ. ಇದರೊಂದಿಗೆ ಮೃತರ ಸಂಖ್ಯೆ 15ಕ್ಕೇರಿದೆ.
ಅವಘಡ ನಡೆದ ಸ್ಥಳದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಬೇಲೆಕೇರಿ ಬಂದರಿನ ಸಮೀಪಬಾಲಕಿಯ ಶವ ಸಿಕ್ಕಿದೆ.ನಾಪತ್ತೆಯಾದವರಶೋಧ ಕಾರ್ಯದಲ್ಲಿರುವಕೋಸ್ಟ್ ಗಾರ್ಡ್ನ ಅಮರ್ತ್ಯ ದೋಣಿಯ ಸಿಬ್ಬಂದಿ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ.ಹಾವೇರಿ ಜಿಲ್ಲೆ ಶಿಗ್ಗಾವಿ ತಾಲ್ಲೂಕಿನ ಬೆಳವಲಕೊಪ್ಪದವಳಾದ ಆಕೆಯ ಜತೆ ಕುಟುಂಬದ 12 ಜನರೂ ಇದ್ದರು.ಅವರ ಪೈಕಿ ಏಳು ಮಂದಿಯ ಮೃತದೇಹಗಳು ಮಂಗಳವಾರ ಪತ್ತೆಯಾಗಿದ್ದವು.
ಹುಣ್ಣಿಮೆಯ ಸಂದರ್ಭದಲ್ಲಿ ಅಲೆಗಳ ಉಬ್ಬರ ಹಾಗೂ ಇಳಿತವಿದ್ದ ಕಾರಣ ಮೃತದೇಹ ಅಷ್ಟೊಂದು ದೂರ ತೇಲಿಕೊಂಡು ಹೋಗಿರಬಹುದು ಎಂದು ಊಹಿಸಲಾಗಿದೆ. ಇದೇ ದೋಣಿಯಲ್ಲಿದ್ದ ಬಾಲಕ ಸಂದೀಪ್ ಪರಸಪ್ಪ (10) ಇನ್ನೂ ಪತ್ತೆಯಾಗಬೇಕಿದ್ದು,ಕಾರ್ಯಾಚರಣೆ ಮುಂದುವರಿದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.