ADVERTISEMENT

ಅಭಿಮಾನಿಗಳಿಂದ ತೊಂದರೆ: ನಟ ಧ್ರುವ ಸರ್ಜಾ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 14:40 IST
Last Updated 30 ಅಕ್ಟೋಬರ್ 2025, 14:40 IST
ಧ್ರುವ ಸರ್ಜಾ 
ಧ್ರುವ ಸರ್ಜಾ    

ಬೆಂಗಳೂರು: ‘ನಟ ಧ್ರುವ ಸರ್ಜಾ ಅವರ ಅಭಿಮಾನಿಗಳಿಂದ ತೊಂದರೆ ಆಗುತ್ತಿದೆ’ ಎಂದು ಆರೋಪಿಸಿ ಶಾಸ್ತ್ರಿನಗರದ ನಿವಾಸಿ ಮನೋಜ್ ಅವರು ದೂರು ನೀಡಿದ್ದು, ಈ ಸಂಬಂಧ ಬನಶಂಕರಿ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ.

‘ಮನೋಜ್ ಅವರು ನೀಡಿದ ದೂರು ಆಧರಿಸಿ ಗಂಭೀರವಲ್ಲದ ಪ್ರಕರಣ (ಎನ್‌ಸಿಆರ್) ದಾಖಲಿಸಿಕೊಳ್ಳಲಾಗಿದೆ. ನ್ಯಾಯಾಲಯದ ಸೂಚನೆ ಮೇರೆಗೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಪೊಲೀಸರು ಹೇಳಿದರು.

ದೂರಿನಲ್ಲಿ ಏನಿದೆ?
‘ನಮ್ಮ ಮನೆಯ ಪಕ್ಕದಲ್ಲಿ ನಟ ಧ್ರುವ ಸರ್ಜಾ ಅವರು ನೆಲಸಿದ್ದಾರೆ. ಅವರ ವ್ಯವಸ್ಥಾಪಕ, ಚಾಲಕ ಹಾಗೂ ನಟನ ಅಭಿಮಾನಿಗಳು ನಮ್ಮ ಮನೆಯ ಎದುರಿನ ರಸ್ತೆಯಲ್ಲಿ ಅಡ್ಡಲಾಗಿ ವಾಹನಗಳನ್ನು ನಿಲ್ಲಿಸಿ ತೊಂದರೆ ನೀಡುತ್ತಿದ್ದಾರೆ. ಅವರ ಅಭಿಮಾನಿಗಳು ಧೂಮಪಾನ ಮಾಡುವುದು ಹಾಗೂ ಉಗುಳುವುದನ್ನು ಮಾಡುತ್ತಿದ್ದಾರೆ’ ಎಂದು ಮನೋಜ್ ದೂರು ನೀಡಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT