ADVERTISEMENT

ಎಂಟು ಐಎಎಸ್‌ ಅಧಿಕಾರಿಗಳಿಗೆ ಉಪವಿಭಾಗಾಧಿಕಾರಿ ಹುದ್ದೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 20:43 IST
Last Updated 16 ಜುಲೈ 2021, 20:43 IST

ಬೆಂಗಳೂರು: ಹುದ್ದೆ ನಿರೀಕ್ಷೆಯಲ್ಲಿದ್ದ 2018 ಮತ್ತು 2019ರ ಬ್ಯಾಚ್‌ನ ಎಂಟು ಐಎಎಸ್‌ ಅಧಿಕಾರಿಗಳನ್ನು ರಾಜ್ಯದ ವಿವಿಧ ಜಿಲ್ಲೆಗಳ ಕಂದಾಯ ಉಪ ವಿಭಾಗಗಳ ಉಪ ವಿಭಾಗಾಧಿಕಾರಿ ಹುದ್ದೆಗೆ ನೇಮಕ ಮಾಡಿ ಶುಕ್ರವಾರ ಆದೇಶ ಹೊರಡಿಸಲಾಗಿದೆ.

ವರ್ಗಾವಣೆ ವಿವರ: ರಾಹುಲ್‌ ರತ್ನಮ್‌ ಪಾಂಡೆ– ಕುಮಟಾ ಉಪ ವಿಭಾಗ, ಉತ್ತರ ಕನ್ನಡ ಜಿಲ್ಲೆ; ವರ್ಣಿತ್‌ ನೇಗಿ– ಹುಣಸೂರು ಉಪ ವಿಭಾಗ, ಮೈಸೂರು ಜಿಲ್ಲೆ, ರಾಹುಲ್‌ ಶರಣಪ್ಪ ಸಂಕನೂರ್– ಲಿಂಗಸುಗೂರು ಉಪ ವಿಭಾಗ, ರಾಯಚೂರು ಜಿಲ್ಲೆ; ಡಾ. ಆಕಾಶ್‌– ಬಳ್ಳಾರಿ ಉಪ ವಿಭಾಗ; ಆನಂದ್‌ ಪ್ರಕಾಶ್ ಮೀನಾ– ಕೋಲಾರ ಉಪ ವಿಭಾಗ; ಪ್ರತೀಕ್‌ ಬಾಯಲ್‌– ಸಕಲೇಶಪುರ ಉಪ ವಿಭಾಗ, ಹಾಸನ ಜಿಲ್ಲೆ; ಮೋನಾ ರೋತ್‌– ಕಲಬುರ್ಗಿ ಉಪ ವಿಭಾಗ ಮತ್ತು ಅಶ್ವೀಜಾ ಬಿ.ವಿ.– ಸೇಡಂ ಉಪ ವಿಭಾಗ, ಕಲಬುರ್ಗಿ ಜಿಲ್ಲೆ.

ಹೆಚ್ಚುವರಿ ಹೊಣೆ: ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್‌ ಅವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹುದ್ದೆ ಹಾಗೂ ಪಶು ಸಂಗೋಪನಾ ಇಲಾಖೆ ಕಾರ್ಯದರ್ಶಿ ಪಿ. ಮಣಿವಣ್ಣನ್‌ ಅವರಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಹುದ್ದೆಯನ್ನು ಹೆಚ್ಚುವರಿಯಾಗಿ ವಹಿಸಿ ಆದೇಶ ಹೊರಡಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.