ADVERTISEMENT

ವಿದ್ಯುತ್‌ ಅವಘಡದಲ್ಲಿ ಒಂದೇ ಕುಟುಂಬದ ಮೂವರ ಸಾವು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2019, 4:17 IST
Last Updated 11 ಸೆಪ್ಟೆಂಬರ್ 2019, 4:17 IST
   

ಹಾಸನ:ಚನ್ನರಾಯಪಟ್ಟಣತಾಲ್ಲೂಕಿನ ಅಗಸರಹಳ್ಳಿಯಲ್ಲಿ ಬುಧವಾರ ಬೆಳಗ್ಗೆವಿದ್ಯುತ್ ಅವಘಡ ಸಂಭವಿಸಿದ್ದು, ಒಂದೇ ಕುಟುಂಬದ ಮೂವರ ಧಾರುಣವಾಗಿ ಸಾವಿಗೀಡಾಗಿದ್ದಾರೆ.

ಭಾಗ್ಯಮ್ಮ(48), ದಾಕ್ಷಾಯಿಣಿ(30), ದಯಾನಂದ(23)ಮೃತರು.ಮನೆ ಮುಂದೆ‌ ತುಂಡಾಗಿ‌ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಈ ಅವಘಡ ಸಂಭವಿಸಿದೆ.

ಬೆಳ್ಳಂಬೆಳಗ್ಗೆ ಬಟ್ಟೆ ತೊಳೆದು ಒಣಹಾಕಲು ಹೋಗಿದ್ದ ದಾಕ್ಷಾಯಿಣಿ ಅವರಿಗೆ ಮೊದಲು ವಿದ್ಯುತ್‌ ತಗುಲಿದೆ. ಮಗಳನ್ನು ರಕ್ಷಿಸಲು ಹೋದ ತಾಯಿಗೌರಮ್ಮ ಮತ್ತು ಸೋದರ ದಯಾನಂದ್‌ ಅವರೂವಿದ್ಯುತ್‌ಗೆ ಸಿಲುಕಿದ್ದಾರೆ.

ADVERTISEMENT

ಸ್ಥಳಕ್ಕೆ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.