ADVERTISEMENT

ಸಾಲಮನ್ನಾ: ಭಾನುವಾರವೂ ಸ್ವಯಂ ದೃಢೀಕರಣ ಸ್ವೀಕರಿಸಿದ ಬ್ಯಾಂಕ್‌

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2018, 20:00 IST
Last Updated 30 ಡಿಸೆಂಬರ್ 2018, 20:00 IST
   

ಕವಿತಾಳ (ರಾಯಚೂರು ಜಿಲ್ಲೆ): ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಇಲ್ಲಿನ ಶಾಖೆಯಲ್ಲಿ ಬೆಳೆ ಸಾಲ ಮನ್ನಾಕ್ಕೆ ಸಂಬಂಧಿಸಿದ ಸ್ವಯಂ ದೃಢೀಕರಣ ಪತ್ರವನ್ನು ಪಡೆದು ಹಿಂಬರಹ ನೀಡುವ ಪ್ರಕ್ರಿಯೆ ರಜಾ ದಿನವಾದ ಭಾನುವಾರವೂ ನಡೆಯಿತು. ಬಿಸಿಲಿನಿಂದ ರೈತರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಬ್ಯಾಂಕ್‌ನಿಂದ ಶಾಮಿಯಾನ ಹಾಕಲಾಗಿತ್ತು.

‘ಬ್ಯಾಂಕ್‌ಗೆ ರಜೆ ಇರುತ್ತದೆ ಎಂದುಕೊಂಡಿದ್ದೆ. ಬ್ಯಾಂಕ್‌ನಲ್ಲಿ ಅರ್ಜಿ ಸ್ವೀಕರಿಸುತ್ತಿರುವುದುನ್ನು ಗಮನಿಸಿ ಬಂದಿದ್ದೇನೆ’ ಎಂದು ರೈತ ರಘುರಡ್ಡಿ ತಿಳಿಸಿದರು. ಬೆಳಿಗ್ಗೆಯಿಂದ ಜಮಾಯಿಸಿದ್ದ ರೈತರು ಅರ್ಜಿ ಸಲ್ಲಿಸಿ ಸ್ವೀಕೃತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT