ADVERTISEMENT

ಬಂಡೀಪುರ ಬಳಿ ಬೆಟ್ಟಕ್ಕೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2019, 19:24 IST
Last Updated 11 ಜನವರಿ 2019, 19:24 IST
ಮಂಗಲ ಗ್ರಾಮದ ಬಳಿ ಕಾಣಿಸಿಕೊಂಡ ಬೆಂಕಿ
ಮಂಗಲ ಗ್ರಾಮದ ಬಳಿ ಕಾಣಿಸಿಕೊಂಡ ಬೆಂಕಿ   

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನದ ಕುಂದುಕರೆ ವಲಯಕ್ಕೆ ಸೇರಿದ ಮಂಗಲ ಗ್ರಾಮದ ಬಳಿ ಶುಕ್ರವಾರ ಬೆಂಕಿ ಕಾಣಿಸಿಕೊಂಡ ಪರಿಣಾಮ ಗೋಮಾಳಕ್ಕೆ ಸೇರಿದ ಬೆಟ್ಟದ ಅರ್ಧಭಾಗ ಸುಟ್ಟುಹೋಗಿದೆ.

ಖಾಸಗಿ ಜಮೀನಿನಿಂದ ಬೆಂಕಿ ಹರಡಿ ಬೆಟ್ಟವನ್ನು ಅವರಿಸಿಕೊಂಡಿದೆ. ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ ಕೆಲ ಪ್ರದೇಶ ಸುಟ್ಟು ಹೋಗಿದೆ. ಆದರೆ, ಈ ಪ್ರದೇಶಗಳು ರಾಷ್ಟ್ರೀಯ ಅಭಯಾರಣ್ಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಎಸಿಎಫ್ ನಟರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT