ಬೆಂಗಳೂರು: ನಗರದ ಫ್ರೆಂಡ್ಸ್ ವೆಲ್ಫೇರ್ ಆರ್ಗನೈಸೇಷನ್ ವತಿಯಿಂದ ಬನಶಂಕರಿಯ ಗಿರಿನಗರದ ಆವಲಹಳ್ಳಿಯಲ್ಲಿರುವ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ಜ.15ರಿಂದ 24ರವರೆಗೆ ಉಚಿತವಾಗಿ ಪ್ಲಾಸ್ಟಿಕ್ ಸರ್ಜರಿ ಮಾಡುವ ಶಿಬಿರ ನಡೆಯಲಿದೆ.
ಜ.15ರಂದು ಬೆಳಿಗ್ಗೆ 8.30ರಿಂದ ರೋಗಿಗಳ ತಪಾಸಣೆ ನಡೆಯಲಿದೆ. ಸುಟ್ಟ ಅಪಘಾತ ಸಂತ್ರಸ್ತರಿಗೆ, ಆ್ಯಸಿಡ್ ಬಾಧಿತರಿಗೆ, ಕೈಗಾರಿಕಾ ಅಥವಾ ವಿದ್ಯುತ್ ಸುಟ್ಟ ಗಾಯದ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಈ ಶಿಬಿರದಲ್ಲಿ ಜರ್ಮನಿಯ ವೈದ್ಯರ ತಂಡ ಉಚಿತ ಚಿಕಿತ್ಸೆ ನೀಡಲಿದೆ. ಜ. 16ರಿಂದ 24ರ ವರೆಗೆ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ– 9880307780 ಅಥವಾ 9148741707ಗೆ ಸಂಪರ್ಕಿಸಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.