ADVERTISEMENT

ಕಾಂಗ್ರೆಸ್ ಕಚೇರಿ ಎದುರು ಗಾಂಧಿ ಪ್ರತಿಮೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2020, 20:04 IST
Last Updated 30 ಜನವರಿ 2020, 20:04 IST
ನಗರ ಕಾಂಗ್ರೆಸ್ ಕಚೇರಿ ಎದುರು ಮಹಾತ್ಮ ಗಾಂಧಿ ಪ್ರತಿಮೆಯನ್ನು ಮುಖಂಡರು ಅನಾವರಣಗೊಳಿಸಿದರು. ಮುಖಂಡರಾದ ಪುಷ್ಪಾ ಅಮರನಾಥ್, ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ, ಎಂ.ವೀರಪ್ಪ ಮೊಯಿಲಿ, ವಿ.ಎಸ್.ಉಗ್ರಪ್ಪ ಇದ್ದಾರೆ
ನಗರ ಕಾಂಗ್ರೆಸ್ ಕಚೇರಿ ಎದುರು ಮಹಾತ್ಮ ಗಾಂಧಿ ಪ್ರತಿಮೆಯನ್ನು ಮುಖಂಡರು ಅನಾವರಣಗೊಳಿಸಿದರು. ಮುಖಂಡರಾದ ಪುಷ್ಪಾ ಅಮರನಾಥ್, ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ, ಎಂ.ವೀರಪ್ಪ ಮೊಯಿಲಿ, ವಿ.ಎಸ್.ಉಗ್ರಪ್ಪ ಇದ್ದಾರೆ   

ಬೆಂಗಳೂರು: ರೇಸ್‌ಕೋರ್ಸ್ ರಸ್ತೆಯ ನಗರ ಕಾಂಗ್ರೆಸ್ ಕಚೇರಿ ಮುಂಭಾಗ ನಿರ್ಮಿಸಿರುವ ಮಹಾತ್ಮ ಗಾಂಧಿ ಪ್ರತಿಮೆಯನ್ನು ಹುತಾತ್ಮರ ದಿನಾಚರಣೆ ದಿನವಾದ ಗುರುವಾರ ಪಕ್ಷದ ಮುಖಂಡರು ಅನಾವರಣಗೊಳಿಸಿದರು.

ನಂತರ ಮಾತನಾಡಿದಮಾಜಿ ಸಂಸದ ಎಂ.ವೀರಪ್ಪ ಮೊಯಿಲಿ ‘ಆರ್‌ಎಸ್‌ಎಸ್‌ನವರು ಗಾಂಧೀಜಿ ವಿರುದ್ಧವಾಗಿದ್ದರು. ಈಗ ಅವರ ಚಿತ್ತ ಮುಸ್ಲಿಮರತ್ತ ತಿರುಗಿದ್ದು, ಅದಕ್ಕಾಗಿಯೇ ಸಿಎಎನಂತಹ ಕಾನೂನು ತರಲಾಗಿದೆ. ಆರ್‌ಎಸ್‌ಎಸ್, ವಿಶ್ವಹಿಂದೂ ಪರಿಷತ್, ಬಜರಂಗದಳ, ಎನ್‌ಆರ್‌ಸಿ ಬಗ್ಗೆ ಮಾತನಾಡಿದರೆ ದೇಶದ್ರೋಹಿಗಳು ಎಂಬ ಪಟ್ಟ ಕಟ್ಟಲಾಗುತ್ತಿದೆ. ಧರ್ಮದ ಹೆಸರಿನಲ್ಲಿ ದೇಶ ವಿಭಜನೆ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

ರಾಜ್ಯ ಸರ್ಕಾರದ ಬಳಿ ಹಣವೇ ಇಲ್ಲವಾಗಿದ್ದು, ಇನ್ನೂ ಪ್ರವಾಹ ಪರಿಹಾರ ಕೊಟ್ಟಿಲ್ಲ. ನೌಕರರಿಗೆ ವೇತನ ನೀಡುವುದು ಕಷ್ಟಕರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಜೆಟ್ ಹೇಗೆ ಮಂಡಿಸುತ್ತಾರೊ ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.