ಬೆಂಗಳೂರು:ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರವು (ವಿಟಿಪಿಸಿ) ದಸ್ತಕರ್ ಸ್ವಯಂಸೇವಾ ಸಂಸ್ಥೆಯ ಸಹಯೋಗದಲ್ಲಿ ಇದೇ 7ರವರೆಗೆ ಭೌಗೋಳಿಕ ಸನ್ನದು (ಜಿಐ) ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಹಮ್ಮಿಕೊಂಡಿದೆ.
ಜಿಐ ಉತ್ಪನ್ನಗಳ ಪರಂಪರೆ ಮತ್ತು ಕಲೆಯನ್ನು ಉತ್ತೇಜಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಈ ಮೇಳವು ಜಯಮಹಲ್ ಪ್ಯಾಲೇಸ್ನಲ್ಲಿ ನಿಗದಿಯಾಗಿದೆ.
ಸಂಡೂರಿನ ಬಂಜಾರ ಕಸೂತಿ ಕಲೆಯ ಉತ್ಪನ್ನಗಳು, ಬಿದಿರು ಕಲೆ, ಚನ್ನಪಟ್ಟಣದ ಬೊಂಬೆ ಮತ್ತು ಆಟಿಕೆ, ಮೈಸೂರಿನ ಸಾಂಪ್ರದಾಯಿಕ ಕಲಾಕೃತಿ ಹಾಗೂ ಇನ್ನಿತರ ಉತ್ಪನ್ನಗಳ ಪ್ರದರ್ಶನ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.