ADVERTISEMENT

ಮಣಿಪುರ ಬಾಂಬ್ ಸ್ಪೋಟ: ಗೋಕಾಕ ಯೋಧ ಉಮೇಶ ಹುತಾತ್ಮ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2018, 17:11 IST
Last Updated 21 ಅಕ್ಟೋಬರ್ 2018, 17:11 IST
ಯೋಧ ಉಮೇಶ ಮಹಾನಿಂಗಪ್ಪ ಹೆಳವರ
ಯೋಧ ಉಮೇಶ ಮಹಾನಿಂಗಪ್ಪ ಹೆಳವರ   

ಗೋಕಾಕ:ನಗರದ ಅಂಬೇಡ್ಕರ್ ಬಡಾವಣೆ ನಿವಾಸಿ, ಸಿಆರ್‌ಪಿಎಫ್ ಯೋಧ ಉಮೇಶ ಮಹಾನಿಂಗಪ್ಪ ಹೆಳವರ (25) ಶನಿವಾರ ಸಂಜೆ ಮಣಿಪುರ ರಾಜ್ಯದ ಇಂಫಾಲ್‌ ನಗರದಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟದಲ್ಲಿ ಹುತಾತ್ಮರಾಗಿದ್ದಾರೆ.

ಬಾಂಬ್‌ ಸ್ಫೋಟಕ್ಕೆ ಸಿಲುಕಿ ಅವರ ಬಲ ಮುಂಗೈ ಸಂಪೂರ್ಣ ಛಿದ್ರಗೊಂಡಿದೆ. ಪಾರ್ಥೀವ ಶರೀರ ಸೋಮವಾರಬೆಳಿಗ್ಗೆವಿಶೇಷ ವಿಮಾನದ ಮೂಲಕ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ತಲುಪಲಿದೆ. ಅಲ್ಲಿಂದ ರಸ್ತೆ ಮಾರ್ಗವಾಗಿ ನಗರಕ್ಕೆ ತರಲಾಗುವುದು ಎಂದುತಹಶೀಲ್ದಾರ್ ಜಿ.ಎಸ್‌. ಮಾಳಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT