ಕಲಬುರ್ಗಿ:ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಲೈಫ್ ಡೌನ್ ಕಥೆಗಳ ಸರಣಿಯ ಮೊದಲ ಲೇಖನಕ್ಕೆ ರಾಜ್ಯ ಸರ್ಕಾರ ತಕ್ಷಣ ಸ್ಪಂದಿಸಿದೆ.
ಬೆಳಿಗ್ಗೆ ಪತ್ರಿಕೆ ಓದಿದ ತಕ್ಷಣ ಪ್ರಜಾವಾಣಿ ಪ್ರತಿನಿಧಿಗೆ ಕರೆ ಮಾಡಿದ ಸಮಾಜ ಕಲ್ಯಾಣ ಖಾತೆಯನ್ನೂ ಹೊಂದಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಶೇರಿಭಿಕನಳ್ಳಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡರು.
‘ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಅಲ್ಲಿಗೆ ಕಳಿಸಿ ವರದಿ ತರಿಸಿಕೊಳ್ಳುತ್ತೇನೆ.ಅಲ್ಲಿಯ ಜನ ಸ್ಥಳಾಂತರಕ್ಕೆ ಸಿದ್ಧ ಇದ್ದರೆ ಅವರಿಗೆ ಪುನರ್ವಸತಿ ಕಲ್ಪಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ಮನೆಗಳನ್ನು ನಿರ್ಮಿಸಿಕೊಡಲಾಗುದು. ನಮ್ಮ ಅಧಿಕಾರಿಗಳ ವರದಿ ಆಧರಿಸಿ ಕ್ರಮಕೈಗೊಳ್ಳುತ್ತೇವೆ’ಎಂದರು.
ಇದನ್ನೂ ಓದಿ...ಕಲಬುರ್ಗಿ: ಕಾಡು ಕೂಸುಗಳ ಕೂಗು
‘ರಾಜ್ಯದ ಇತರೆಡೆಯೂ ಅರಣ್ಯ ಇಲಾಖೆಯ ಜಮೀನುಗಳಲ್ಲಿ ವಾಸವಾಗಿರುವವರು ಸ್ಥಳಾಂತರಕ್ಕೆ ಸಿದ್ಧ ಇದ್ದರೆ ಅವರಿಗೆ ಪುನರ್ವಸತಿ ಕಲ್ಪಿಸಲು ಬದ್ಧ. ಆದರೆ, ಬಹುತೇಕ ಕಡೆ ಅವರು ಅಲ್ಲಿಂದ ಬೇರೆಡೆ ಸ್ಥಳಾಂತರಗೊಳ್ಳಲು ಸಿದ್ಧರಿಲ್ಲ’ಎಂದೂ ಡಿಸಿಎಂ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.