ADVERTISEMENT

ವಿಶ್ವನಾಥ್‌ ಸಚಿವರಾಗುತ್ತಾರೆ: ಜಿ.ಟಿ.ದೇವೇಗೌಡ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2019, 19:48 IST
Last Updated 10 ನವೆಂಬರ್ 2019, 19:48 IST
   

ಹುಣಸೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ ಎಚ್‌.ವಿಶ್ವನಾಥ್ ಅವರಿಗೆ ಭವಿಷ್ಯದಲ್ಲಿ ಸಚಿವರಾಗುವ ಅವಕಾಶ ಇದೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ತಾಲ್ಲೂಕಿನ ಧರ್ಮಾಪುರ ಗ್ರಾಮದಲ್ಲಿ ಭಾನುವಾರ ಮಾತನಾಡಿ, 'ವಿಶ್ವನಾಥ್‌ ಅವರು ರಾಜಕೀಯ ಚತುರತೆ ಹೊಂದಿದ್ದಾರೆ. ಅವರ ಸಲಹೆಯನ್ನು ಪಕ್ಷದ ವರಿಷ್ಠರು, ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸುವವರು ಪಡೆಯದೆ ಅವಮಾನಿಸಿದರು’ ಎಂದರು.

ಈಚೆಗೆ ಬಿಜೆಪಿ ಸೇರಿರುವ ಸಿ.ಎಚ್‌.ವಿಜಯಶಂಕರ್‌, ಅನರ್ಹ ಶಾಸಕ ವಿಶ್ವನಾಥ್‌, ಜಿ.ಟಿ.ದೇವೇಗೌಡ, ಅವರ ಪುತ್ರ ಜಿ.ಡಿ.ಹರೀಶ್‌ ಗೌಡ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.