ಕಲಬುರ್ಗಿ: ಲಾಕ್ಡೌನ್ ಕಾರಣ ಆಗಸ್ಟ್ 2ರ ವರೆಗೆ ಪ್ರತಿ ಭಾನುವಾರ ಕ್ಷೌರದ ಅಂಗಡಿಗಳು ಬಂದ್ ಇರಲಿವೆ. ಹೀಗಾಗಿ ವಾರದ ರಜಾ ದಿನವಾದ ಮಂಗಳವಾರದಂದು (ಮುಂದಿನ ನಾಲ್ಕು ವಾರ) ಕ್ಷೌರದ ಅಂಗಡಿಗಳನ್ನು ತೆರೆಯಬೇಕು ಎಂದು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಸುಭಾಸ ಬಿ.ಬಾದಾಮಿ ತಿಳಿಸಿದ್ದಾರೆ.
ಭಾನುವಾರದ ಲಾಕ್ಡೌನ್ ಅವಧಿ ಮುಗಿಯುವವರೆಗೂ ಈ ಕ್ರಮ ಅನುಸರಿಸುವಂತೆ ಅವರು ಕ್ಷೌರದ ಅಂಗಡಿಗಳವರಿಗೆ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.