ADVERTISEMENT

ದೆಹಲಿಯಲ್ಲಿ ಎಚ್‌ಡಿಕೆ ಭೇಟಿಯಾದ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಡಿಸೆಂಬರ್ 2025, 8:23 IST
Last Updated 11 ಡಿಸೆಂಬರ್ 2025, 8:23 IST
<div class="paragraphs"><p>ನಿರಂಜನಾನಂದಪುರಿ ಸ್ವಾಮೀಜಿ, ಎಚ್.ಡಿ. ಕುಮಾರಸ್ವಾಮಿ</p></div>

ನಿರಂಜನಾನಂದಪುರಿ ಸ್ವಾಮೀಜಿ, ಎಚ್.ಡಿ. ಕುಮಾರಸ್ವಾಮಿ

   

(ಚಿತ್ರ ಕೃಪೆ: X/@hd_kumaraswamy)

ನವದೆಹಲಿ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ದೆಹಲಿಯಲ್ಲಿ ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಇಂದು (ಗುರುವಾರ) ಭೇಟಿಯಾಗಿದ್ದಾರೆ.

ADVERTISEMENT

ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್‌'ನಲ್ಲಿ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ.

'ಕಾಗಿನೆಲೆ ಕನಕ ಗುರುಪೀಠದ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿಗಳವರು ನವದೆಹಲಿಯ ನನ್ನ ನಿವಾಸಕ್ಕೆ ಆಗಮಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಹಾಲುಮತ ಸಮಾಜದ ಅಭ್ಯುದಯದ ಬಗ್ಗೆ ಪರಮಪೂಜ್ಯರು ಚರ್ಚಿಸಿದರು' ಎಂದು ತಿಳಿಸಿದ್ದಾರೆ.

'ಮಾಜಿ ಮಂತ್ರಿಗಳಾದ ಬಂಡೆಪ್ಪ ಕಾಶೆಂಪೂರ್, ಸಂಸತ್ ಸದಸ್ಯರಾದ ರಾಜಶೇಖರ್ ಹಿಟ್ನಾಳ, ಮಾಜಿ ಸಂಸದರಾದ ವಿರೂಪಾಕ್ಷಪ್ಪ, ಮಾಜಿ ಸ್ಪೀಕರ್ ರಘುನಾಥ ಮಲ್ಕಾಪುರೆ ಸೇರಿ ಹಾಲುಮತ ಮಹಾಸಭಾದ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು' ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.