ADVERTISEMENT

ಧಾರಾಕಾರ ಮಳೆ: ಹೊಗೆಸೊಪ್ಪು ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 17 ಜೂನ್ 2022, 20:30 IST
Last Updated 17 ಜೂನ್ 2022, 20:30 IST
ಕೊಣನೂರು ಸಮೀಪದ ಕೆರೆಕೋಡಿ ಗ್ರಾಮದ ಹೊಗೆಸೊಪ್ಪು ಜಮೀನಿನಲ್ಲಿ ಮಳೆಯ ನೀರು ತುಂಬಿದೆ
ಕೊಣನೂರು ಸಮೀಪದ ಕೆರೆಕೋಡಿ ಗ್ರಾಮದ ಹೊಗೆಸೊಪ್ಪು ಜಮೀನಿನಲ್ಲಿ ಮಳೆಯ ನೀರು ತುಂಬಿದೆ   

ಮೈಸೂರು: ಮೈಸೂರು ಭಾಗದ ಹಾಸನ ಮತ್ತು ಕೊಡಗಿನಲ್ಲಿ ಶುಕ್ರವಾರ ಧಾರಾಕಾರ ಮಳೆ ಸುರಿಯಿತು.

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರು ಮತ್ತು ರಾಮನಾಥಪುರ ಹೋಬಳಿಗಳ ವ್ಯಾಪ್ತಿಯಲ್ಲಿ ನಾಟಿ ಮಾಡಿದ್ದ ಹೊಗೆಸೊಪ್ಪಿನ ಗಿಡಗಳು ಹಾಳಾಗಿದ್ದು, ಬೆಳೆಗೆ ನೀಡಿದ್ದ ರಸಗೊಬ್ಬರವೂ ನೀರು ಪಾಲಾಗಿದೆ. ಮಳೆಯ ಹೊಡೆತದಿಂದ ಅಡಿಕೆ ಬೆಳೆಯಲ್ಲಿಹರಳು ಉದುರುವ ಅತಂಕವೂ ಎದುರಾಗಿದೆ.

ಕೊಡಗು ಜಿಲ್ಲೆಯ ಸುಂಟಿಕೊಪ್ಪ ಪಟ್ಟಣ ಸೇರಿದಂತೆ ಗದ್ದೆಹಳ್ಳ, ಬಾಳೆಕಾಡು ಗ್ರಾಮಗಳಲ್ಲಿ ಮುಂಜಾನೆ 3ರಿಂದ 4 ಗಂಟೆವರೆಗೆ ಜೋರು ಮಳೆ ಬಿತ್ತು. ಮತ್ತೆ ಸಂಜೆಯೂ ಮಳೆ ಸುರಿಯಿತು.

ಚಿಕ್ಕಬಳ್ಳಾಪುರ ಕೆಲವೆಡೆ ಉತ್ತಮ ಮಳೆ

ADVERTISEMENT

ಚಿಕ್ಕಬಳ್ಳಾಪುರ: ಜಿಲ್ಲೆಯ ಕೆಲವೆಡೆ ಗುರುವಾರ ರಾತ್ರಿ ಉತ್ತಮ ಮಳೆ ಸುರಿಯಿತು.

ಗೌರಿಬಿದನೂರು ತಾಲ್ಲೂಕಿನ ಉತ್ತರ ಪಿನಾಕಿನಿ ನದಿ ಮತ್ತೆ ಮೈದುಂಬಿ ಹರಿದಿದೆ. ಬಾಗೇಪಲ್ಲಿ ತಾಲ್ಲೂಕಿನ ಪರಗೋಡು ಚಿತ್ರಾವತಿ ಜಲಾಶಯ ಭರ್ತಿ ಆಗಿದೆ. ಚಿಂತಾಮಣಿ ತಾಲ್ಲೂಕಿನ ಪಾಪಾಗ್ನಿ ನದಿ ಹರಿಯುತ್ತಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ಶ್ರೀನಿವಾಸ ಸಾಗರ, ಜಕ್ಕಲಮಡುಗು ಜಲಾಶಯದತ್ತ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದೆ.

ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕೆರೆ, ಕಟ್ಟೆಗಳಿಗೆ ನೀರು ಹರಿಯುತ್ತಿದೆ. ಸತತ ಎರಡು ತಾಸಿಗೂ ಹೆಚ್ಚು ಕಾಲ ಮಳೆ ಸುರಿದಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ಗ್ರಾಮೀಣ ಭಾಗದ ಹೊಲಗಳಲ್ಲಿ ನೀರು ನಿಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.