ADVERTISEMENT

ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಅರವಿಂದ ಪ್ರಮಾಣ ವಚನ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2023, 14:43 IST
Last Updated 25 ಅಕ್ಟೋಬರ್ 2023, 14:43 IST
ಕೆ.ವಿ.ಅರವಿಂದ ನೂತನ ನ್ಯಾಯಮೂರ್ತಿ
ಕೆ.ವಿ.ಅರವಿಂದ ನೂತನ ನ್ಯಾಯಮೂರ್ತಿ   

ಬೆಂಗಳೂರು: ರಾಜ್ಯ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ವಕೀಲ ಕೆ.ವಿ.ಅರವಿಂದ ಬುಧವಾರ ರಾಜ್ಯಪಾಲರಿಂದ ಪ್ರಮಾಣ ವಚನ ಸ್ವೀಕರಿಸಿದ್ದು, ಇದರಿಂದ ಹೈಕೋರ್ಟ್‌ನ ಒಟ್ಟು ನ್ಯಾಯಮೂರ್ತಿಗಳ ಸಂಖ್ಯೆ 52ಕ್ಕೆ ಏರಿದಂತಾಗಿದೆ. 

ಕೋಲಾರ ತಾಲ್ಲೂಕಿನ ದೊಡ್ಡಕುರುಬರ ಹಳ್ಳಿಯ ಕೆ.ವಿ.ಅರವಿಂದ ಅವರು ಬೆಂಗಳೂರು ವಿಶ್ವವಿದ್ಯಾಲಯ ಕಾನೂನು ಕಾಲೇಜಿನಿಂದ ಪದವಿ ಪಡೆದಿದ್ದಾರೆ. 2004ರಿಂದ 2012ರವರೆಗೆ ಆದಾಯ ತೆರಿಗೆ ಇಲಾಖೆಯ ಪರ ವಕೀಲರಾಗಿ ಮತ್ತು ಕೇಂದ್ರ ಅಬಕಾರಿ, ಸುಂಕ ಮತ್ತು ಜಿಎಸ್‌ಟಿ ಪರ ವಕೀಲರಾಗಿ ಹೈಕೋರ್ಟ್‌ನಲ್ಲಿ ಪ್ರತಿನಿಧಿಸಿದ ಅನುಭವ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT