ಬೆಂಗಳೂರು: ಸೇನಾಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸಾವಿನ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿ ಬರಹಗಳು, ಪೋಸ್ಟ್ಗಳನ್ನು ಪ್ರಕಟಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿದ್ದಾರೆ.
ದೇಶದ ಹೆಮ್ಮೆಯ ಸೇನಾನಿಯಾದ ಬಿಪಿನ್ ರಾವತ್ ಅವರ ಸಾವನ್ನು ಸಂಭ್ರಮಿಸುವಂತಹ ಬರಹಗಳನ್ನು ಕೆಲವು ದುಷ್ಕರ್ಮಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಡುತ್ತಿದ್ದಾರೆ. ಇಂತಹ ದೇಶವಿರೋಧಿಗಳನ್ನು ಪತ್ತೆಹಚ್ಚಿ, ತಕ್ಕ ಶಿಕ್ಷೆ ವಿಧಿಸಬೇಕಿದೆ. ಈ ರೀತಿಯ ವಿಕೃತ ಮನಸ್ಸಿನವರನ್ನು ವಿಳಂಬ ಮಾಡದೆ ಪತ್ತೆಹಚ್ಚಿ, ಕ್ರಮ ಜರುಗಿಸುವಂತೆ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ನಿರ್ದೇಶನ ನೀಡಲಾಗಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.
ರಾವತ್ ಸಾವು ದೇಶಕ್ಕೆ ಭರಿಸಲಾಗದ ನಷ್ಟ. ಅವರು ದೇಶಕ್ಕೆ ಸಲ್ಲಿಸಿರುವ ಸೇವೆಯು ಅಸಾಧಾರಣವಾದುದು. ಅಂತವಹರ ಬಗ್ಗೆ ವಿಕೃತವಾಗಿ ಪೋಸ್ಟ್ಗಳನ್ನು ಹಾಕುವುದನ್ನು ಸಹಿಸುವುದಿಲ್ಲ. ಈ ಬಗ್ಗೆ ಪೊಲೀಸ್ ಮಹಾನಿರ್ದೇಶಕರ ಜತೆ ಶನಿವಾರ ಬೆಳಿಗ್ಗೆ ಚರ್ಚೆ ನಡೆಸಿದ್ದೇನೆ ಎಂದು ಹೇಳಿದ್ದಾರೆ.
ಇವನ್ನೂ ಓದಿ
*ಅಪ್ಪ ಇಲ್ಲದಿರುವಬದುಕು ಭಯವಾಗುತ್ತಿದೆ:ಬ್ರಿಗೇಡಿಯರ್ಲಿದ್ದರ್ಪುತ್ರಿಆಶ್ನಾ
*ರಾವತ್ ದಂಪತಿಯ ಮದುವೆಯ ಕ್ಷಣವನ್ನು ನೋವಿನಿಂದ ನೆನಪಿಸಿಕೊಂಡ ಮಧುಲಿಕಾ ಸೋದರ
*ಸಿಡಿಎಸ್ ರಾವತ್ಗೆ ದುಃಖತಪ್ತ ವಿದಾಯ
*ಬಿಪಿನ್ ರಾವತ್ ಸಾವಿನ ಬಗ್ಗೆ ಕಾಮೆಂಟ್: ಬ್ಯಾಂಕ್ ಉದ್ಯೋಗಿ ಅಮಾನತು
*ಬಿಪಿನ್ ರಾವತ್ ಸಾವು: ವಿಕೃತ ಪೋಸ್ಟ್ ಮಾಡಿದವರ ವಿರುದ್ಧ ಎಫ್ಐಆರ್; ಸಿಎಂ ಸೂಚನೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.