ADVERTISEMENT

ಕಾನ್‌ಸ್ಟೆಬಲ್‌ ಆಕಾಂಕ್ಷಿಗಳ ಅಹವಾಲನ್ನು ಸಹನೆಯಿಂದ ಕೇಳಿದ್ದೇನೆ: ಆರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2022, 13:33 IST
Last Updated 1 ನವೆಂಬರ್ 2022, 13:33 IST
ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ   

ಬೆಂಗಳೂರು: ಪೊಲೀಸ್‌ ಕಾನ್‌ಸ್ಟೆಬಲ್‌ ಹುದ್ದೆ ಆಕಾಂಕ್ಷಿಗಳು ನೇಮಕಾತಿಗೆ ಆಗ್ರಹಿಸಿ ಮನವಿ ಸಲ್ಲಿಸಲು ಬಂದಾಗ ಗೃಹ ಸಚಿವರು ಉಡಾಫೆ, ದುರಹಂಕಾರದಿಂದ ವರ್ತಿಸಿದ್ದಾರೆ ಎಂಬ ಕಾಂಗ್ರೆಸ್‌ ಆರೋಪವನ್ನು ಗೃಹ ಸಚಿವಆರಗ ಜ್ಞಾನೇಂದ್ರ ತಳ್ಳಿ ಹಾಕಿದ್ದಾರೆ.

ಆಕಾಂಕ್ಷಿಗಳ ಅಹವಾಲನ್ನು ಅತ್ಯಂತ ಸಹಾನುಭೂತಿ ಹಾಗೂ ಸಹನೆಯಿಂದ ಕೇಳಿದ್ದೇನೆ. ಸಕಾರಾತ್ಮಕವಾಗಿ ಸ್ಪಂದಿಸಿದ್ದೇನೆ. ದುರುಂಹಾರ, ದುಂಡಾವರ್ತನೆ, ದರ್ಪ ಏನಿದ್ದರೂ ಕಾಂಗ್ರೆಸ್‌ನವರ ಸಂಸ್ಕೃತಿ ಎಂದು ಜ್ಞಾನೇಂದ್ರ ದೂರಿದ್ದಾರೆ.

ಪೊಲೀಸ್‌ ಕಾನ್‌ಸ್ಟೆಬಲ್‌ ಉದ್ಯೋಗ ಆಕಾಂಕ್ಷಿಗಳು ಕಣ್ಣೀರಿಡುತ್ತ ಗೃಹ ಸಚಿವರಿಗೆ ಮನವಿ ಸಲ್ಲಿಸುತ್ತಿರುವ ವಿಡಿಯೊ ತುಣುಕನ್ನು ಹಂಚಿಕೊಂಡಿದ್ದ ಕಾಂಗ್ರೆಸ್‌, ಜನರೊಂದಿಗೆ ನಡೆದುಕೊಳ್ಳುವ ರೀತಿ ಇದೇನಾ? ಎಂದು ಪ್ರಶ್ನಿಸಿತ್ತು. ಈ ದರ್ಪ, ದೌಲತ್ತುಗಳ ಆಯಸ್ಸು ಕೆಲವೇ ತಿಂಗಳುಗಳಷ್ಟೇ, ನೆನಪಿರಲಿ ಎಂದು ಎಚ್ಚರಿಕೆ ನೀಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.