ಹೊಸಪೇಟೆ: ಚುನಾವಣಾ ಕರ್ತವ್ಯಕ್ಕೆ ನಗರದ 132(ಎ) ಮತಗಟ್ಟೆಗೆ ಹೆಚ್ಚುವರಿ ಸಿಬ್ಬಂದಿಯಾಗಿ ನೇಮಕಗೊಂಡಿದ್ದ ಮಂಜುನಾಥ ಎಂಬುವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
'ನಿನ್ನೆ ಮಧ್ಯಾಹ್ನವೇ ಅವರು ಅಸ್ವಸ್ಥಗೊಂಡಿದ್ದರು. ವಿಶ್ರಾಂತಿ ಪಡೆದುಕೊಳ್ಳುವಂತೆ ತಿಳಿಸಿ, ಕೆಲಸದಿಂದ ಬಿಡುಗಡೆ ಮಾಡಲಾಗಿತ್ತು. ತಡರಾತ್ರಿ ತೀವ್ರ ಅನಾರೋಗ್ಯ, ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರು ಕುರುಗೋಡು ತಾಲ್ಲೂಕಿನವರು' ಎಂದು ಉಪವಿಭಾಗಾಧಿಕಾರಿ ಪಿ.ಎನ್. ಲೋಕೇಶ್ ಪ್ರಜಾವಾಣಿಗೆ ಮಾಹಿತಿ ನೀಡಿದರು.
ಮತದಾನ ಮಾಡಿದ ಬಳಿಕ ನಿಧನ
ಹೊಸಪೇಟೆಯ7ನೇ ವಾರ್ಡ್ನ ಅನಂತಶಯನ ಗುಡಿ ಏರಿಯಾದ ಪಂಡರಾಪುರ ಕಾಲೋನಿ ಬಳಿಯ ಬೂತ್ ಸಂಖ್ಯೆ 22ರಲ್ಲಿ ಮತದಾನ ಮಾಡಿ ಬಂದ ಬಂಡಿ ನಾರಾಯಣಪ್ಪ(70) ಎಂಬುವರು ನಿಧನರಾಗಿದ್ದಾರೆ.
* ಇವನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.