ಬೆಳಗಾವಿ: ಸವದತ್ತಿ ತಾಲ್ಲೂಕಿನ ಯರಗಟ್ಟಿ ಸಮೀಪದಲ್ಲಿಬಾಗಲಕೋಟೆ–ಬೆಳಗಾವಿ ರಸ್ತೆಯಲ್ಲಿ ಬುಧವಾರ ಅಪರಿಚಿತ ವಾಹನ ಡಿಕ್ಕಿಯಾಗಿ ಕತ್ತೆಕಿರುಬ ಸಾವಿಗೀಡಾಗಿದೆ.
ಅದು ರಸ್ತೆ ದಾಟುತ್ತಿದ್ದಾಗ ವಾಹನ ಡಿಕ್ಕಿಯಾಗಿದೆ ಎಂದು ತಿಳಿದುಬಂದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
‘ಅಲ್ಲಿ ಕತ್ತೆಕಿರುಬದ ಚಲನವಲನ ಇರುವುದಾಗಿ ಮಾಹಿತಿ ಇತ್ತು. ಈ ಅಪಘಾತದಿಂದಾಗಿ ಅವು ಆ ಭಾಗದಲ್ಲಿರುವುದು ದೃಢಪಟ್ಟಿದೆ. ಅಲ್ಲಿ ಕ್ಯಾಮೆರಾ ಟ್ರ್ಯಾಪ್ ಅಳವಡಿಸಲಾಗುವುದು. ಕಳೆಬರದ ಅಂತ್ಯಕ್ರಿಯೆಯನ್ನು ಮಾರ್ಗಸೂಚಿಗಳ ಪ್ರಕಾರ ನೆರವೇರಿಸಲಾಯಿತು’ ಎಂದು ಆರ್ಎಫ್ಒ ಸುನೀತಾ ನಿಂಬರಗಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.