ADVERTISEMENT

ಜೆಡಿಎಸ್‌ ಬಿಟ್ಟಿಲ್ಲ: ಶಾಸಕ ಶ್ರೀನಿವಾಸ್‌

​ಪ್ರಜಾವಾಣಿ ವಾರ್ತೆ
Published 28 ಮೇ 2022, 20:24 IST
Last Updated 28 ಮೇ 2022, 20:24 IST

ಹಾಗಲವಾಡಿ: ‘ನಾನು ಜೆಡಿಎಸ್ ಬಿಟ್ಟಿರುವುದಾಗಿ ಎಂದೂ, ಎಲ್ಲೂ ಹೇಳಿಲ್ಲ. ಇನ್ನೊಬ್ಬರನ್ನು ತಂದು ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಿದವರನ್ನೇ ಕೇಳಬೇಕು. ಕಾರ್ಯಕರ್ತರಲ್ಲಿ ಗೊಂದಲಬೇಡ’ ಎಂದು ಗುಬ್ಬಿ ಜೆಡಿಎಸ್‌ ಶಾಸಕ ಶ್ರೀನಿವಾಸ್ ಹೇಳಿದ್ದಾರೆ.

‘ಗುಬ್ಬಿ ಕ್ಷೇತ್ರದಲ್ಲಿ ಹಾಲಿ ಶಾಸಕರಿದ್ದರೂ ಇನ್ನೊಬ್ಬರನ್ನು ಅಭ್ಯರ್ಥಿ ಎಂದು ಘೋಷಿಸಿ ಗೊಂದಲ ಸೃಷ್ಟಿಸಿದ ಮುಖಂಡರೇ ನನಗೆ ಕರೆಮಾಡಿ ಮಾತಾಡಲು ಕರೆಯುತ್ತಿದ್ದಾರೆ. ಕುಳಿತು ಮಾತನಾಡಿದರೆ ತಿಳಿಯುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT