ADVERTISEMENT

ಮತ್ತೆ ಬಂದಿದೆ ಜೀವ ಬೆದರಿಕೆ ಪ್ರೇಮಪತ್ರ: ಕುಂ.ವೀ

​ಪ್ರಜಾವಾಣಿ ವಾರ್ತೆ
Published 28 ಮೇ 2022, 19:32 IST
Last Updated 28 ಮೇ 2022, 19:32 IST
ಕುಂ.ವೀರಭದ್ರಪ್ಪ
ಕುಂ.ವೀರಭದ್ರಪ್ಪ   

ದಾವಣಗೆರೆ: ‘ಸತ್ಯ ಮಾತನಾಡಿದರೆ, ಜಾತಿ ತಾರತಮ್ಯ, ಅಸಮಾನತೆಯ ಬಗ್ಗೆ, ಕೋಮು ಹಿಂಸೆಯ ಬಗ್ಗೆ ಮಾತನಾಡುವವರಿಗೆ ಜೀವ ಬೆದರಿಕೆಯ ಪ್ರೇಮ ಪತ್ರಗಳು ಬರುತ್ತಿರುತ್ತವೆ. ಈಗ ಮತ್ತೆ ಅಂಥ ಪತ್ರ ನನಗೆ ಬಂದಿದೆ’ಎಂದು ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.

ಶನಿವಾರ ನಡೆದ ಮೇ ಸಾಹಿತ್ಯ ಮೇಳದ ಸಮಾರೋಪದಲ್ಲಿ ಮಾತನಾಡಿದ ಅವರು, ‘ಇದಕ್ಕಿಂತ ಹಿಂದೆ 61 ಮಂದಿಗೆ ಬೆದರಿಕೆ ಪತ್ರ ಬಂದಾಗ ‘ಈ 61ರಲ್ಲಿ ಏಳೆಂಟು ಮಂದಿ ಮುಗಿಸಿದರೆ ಬುದ್ಧಿ ಬರುತ್ತದೆ’ ಎಂದು ಒಬ್ಬ ಪ್ರತಿಕ್ರಿಯಿಸಿದ್ದು ಇವರನ್ನು ಪೊಲೀಸರು ಇನ್ನೂ ಬಂಧಿಸಿಲ್ಲ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT