ಅಥಣಿ: ‘ನಾನು ಮಳ್ಳ ಅಲ್ಲ. ಅಂತೆಯೇ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಷ್ಟು ಕೆಲಸ ತರುವಚತುರತೆ ನನಗಿಲ್ಲ’ ಎಂದು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿಮಂಗಳವಾರ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನೆರೆ ಸಂದರ್ಭದಲ್ಲಿ ನಾನು ಸಂತ್ರಸ್ತರ ಕಷ್ಟಗಳನ್ನು ಆಲಿಸಿದ್ದೇನೆ. ಮುಂದಿನ ದಿನಗಳಲ್ಲೂ ನೆರವಾಗುತ್ತೇವೆ ಎಂದು ಅವರಿಗೆ ಪ್ರಚಾರದ ವೇಳೆಯೂ ಭರವಸೆ ಕೊಟ್ಟಿದ್ದೇವೆ. ಕೆಲವರು, ಅವರನ್ನು ರಾಜಕೀಯವಾಗಿ ಚಿವುಟಿ ಅಳಿಸುತ್ತಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ. ಪ್ರಾಮಾಣಿಕವಾಗಿ ಅವರಿಗೆ ಸ್ಪಂದಿಸುತ್ತೇನೆ’ ಎಂದು ಹೇಳಿದರು.
‘ವಿರೋಧಿಗಳಿಗೆ ನನ್ನನ್ನು ಟೀಕಿಸುವುದು ಬಿಟ್ಟರೆ ಬೇರೆ ಕಾರ್ಯಸೂಚಿ ಇಲ್ಲ. ಆದರೆ, ನಾನು ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದೇನೆ. ನೀರಾವರಿ, ಕೆರೆಗಳನ್ನು ತುಂಬಿಸುವುದು ಮೊದಲಾದ ಅಭಿವೃದ್ಧಿ ಕಾರ್ಯ ನಡೆಯಬೇಕಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.