ಬೆಂಗಳೂರು: ರಾಜ್ಯ ಸರ್ಕಾರ ಶುಕ್ರವಾರ ಹಲವು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಿದೆ. ಬೆಂಗಳೂರು ನಗರಪೊಲೀಸ್ ಕಮಿಷನರ್ ಆಗಿ ಭಾಸ್ಕರ ರಾವ್ ಅವರನ್ನು ನಿಯೋಜಿಸಲಾಗಿದೆ.
ಇದುವರೆಗೂ ನಗರ ಪೊಲೀಸ್ ಕಮಿಷನರ್ ಆಗಿದ್ದ ಅಲೋಕ್ ಕುಮಾರ್ ಅವರನ್ನು ಕೆಎಸ್ಆರ್ಪಿ ಎಡಿಜಿಪಿಯನ್ನಾಗಿ ವರ್ಗಾಯಿಸಲಾಗಿದೆ.
ಹೇಮಂತ್ ನಿಂಬಾಳ್ಕರ್–ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಕಮಿಷನರ್,ಆರ್.ಚೇತನ್–ಎಸ್ಪಿ, ಕರಾವಳಿ ರಕ್ಷಣಾ ಪೊಲೀಸ್, ಉಡುಪಿ, ಡಿ.ದೇವರಾಜ–ಎಸ್ಪಿ, ಅಪರಾಧ ತನಿಖಾ ವಿಭಾಗ, ಬೆಂಗಳೂರು, ಡಾ.ಎಂ.ಅಶ್ವಿನಿ–ಡಿಸಿಪಿ ಗುಪ್ತಚರ, ಬೆಂಗಳೂರು ನಗರ, ಡಾ.ರಾಜ್ವೀರ್ ಪ್ರತಾಪ್ ಶರ್ಮಾ– ಎಡಿಜಿಪಿ, ಸಂವಹನ, ಸಾಗಣೆ ಮತ್ತು ಆಧುನೀಕರಣ, ಬೆಂಗಳೂರು, ಮಾಲಿನಿ ಕೃಷ್ಣಮೂರ್ತಿ– ಎಡಿಜಿಪಿ, ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗ.
ಐಎಎಸ್:ಪಿ.ರವಿಕುಮಾರ್– ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ. ಶಿವಯೋಗಿ ಸಿ.ಕಳಸದ–ಮುಖ್ಯಮಂತ್ರಿಗಳ ಕಾರ್ಯದರ್ಶಿ, ಹೆಚ್ಚುವರಿಯಾಗಿ ಕೆಎಸ್ಆರ್ಟಿಸಿ ಎಂಡಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.