ADVERTISEMENT

ಐಎಎಸ್, ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

ಶಿಕ್ಷಣ ಇಲಾಖೆಯಿಂದ ಜಾಫರ್ ವರ್ಗ; ಬಸವರಾಜು, ಶಂಕರ್ ನಿವೃತ್ತಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2019, 20:14 IST
Last Updated 29 ಜೂನ್ 2019, 20:14 IST
   

ಬೆಂಗಳೂರು: 14 ಐಎಎಸ್‌ ಹಾಗೂ 11 ಐಪಿಎಸ್‌ ಸೇರಿದಂತೆ ಒಟ್ಟು 62 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಬಸವರಾಜು ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ವಿ.ಶಂಕರ್ ವಯೋ ನಿವೃತ್ತಿಯಾಗಿದ್ದು, ಅವರ ಜಾಗಕ್ಕೆ ಬೇರೆಯವರನ್ನು ವರ್ಗಾವಣೆ ಮಾಡಲಾಗಿದೆ.

ಐಪಿಎಸ್‌: ಸೀಮಂತ್‌ಕುಮಾರ್ ಸಿಂಗ್‌–ಐಜಿ‍ಪಿ(ಆಡಳಿತ), ಕೇಂದ್ರ ಕಚೇರಿ, ಬೆಂಗಳೂರು. ಎಸ್‌. ಮುರುಗನ್‌–ಹೆಚ್ಚುವರಿ ಪೊಲೀಸ್ ಕಮಿಷನರ್‌, ಬೆಂಗಳೂರು ಪೂರ್ವ. ಎಸ್.ಎನ್. ಸಿದ್ದರಾಮಪ್ಪ–ಡಿಐಜಿ, ಅಗ್ನಿ ಶಾಮಕ ಸೇವೆ, ಬೆಂಗಳೂರು. ಎಂ.ಎನ್. ಅನುಚೇತ್–ಡಿಸಿಪಿ, ವೈಟ್‌ಫೀಲ್ಡ್‌, ಬೆಂಗಳೂರು. ಅಭಿನವ್ ಖರೆ–ಕಮ್ಯಾಂಡೆಂಟ್‌, 4 ನೇ ಬೆಟಾಲಿಯನ್, ಕರ್ನಾಟಕ ಮೀಸಲು ಪೊಲೀಸ್‌ ಪಡೆ, ಬೆಂಗಳೂರು. ದೆಕ್ಕಾ ಕಿಶೋರ್ ಬಾಬು–ಡಿಸಿ‍ಪಿ, ಕಾನೂನು ಮತ್ತು ಸುವ್ಯವಸ್ಥೆ, ಕಲಬುರ್ಗಿ. ಲೋಕೇಶ್ ಭರಮಪ್ಪ ಜಗಲಾಸರ–ಎಸ್‌ಪಿ, ಬಾಗಲಕೋಟೆ. ಅಬ್ದುಲ್‌ ಅಹದ್‌–ಎಸ್‌ಪಿ, ಭ್ರಷ್ಟಾಚಾರ ನಿಗ್ರಹ ದಳ, ಬೆಂಗಳೂರು. ಕೆ.ಜಿ. ದೇವರಾಜು–ಎಸ್‌ಪಿ, ಹಾವೇರಿ. ಸಂಜೀವ ಎಂ. ಪಾಟೀಲ–ಎಸ್‌ಪಿ, ರೈಲ್ವೆ, ಬೆಂಗಳೂರು. ಕೆ. ಪರಶುರಾಮ–ಎಸ್‌ಪಿ. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ, ಬೆಂಗಳೂರು.

ADVERTISEMENT

ಐಎಫ್ಎಸ್‌: ವಿಜಯಕುಮಾರ್–ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ಸೋಪ್ಸ್‌ ಎಂಡ್ ಡಿಜರ್ಟೆಂಟ್ಸ್‌ ಲಿಮಿಟೆಡ್‌, ಬೆಂಗಳೂರು. ಅಜಿತ್ ಕುಲಕರ್ಣಿ–ಉಪ ಸಂರಕ್ಷಣಾಧಿಕಾರಿ, ದಾವಣಗೆರೆ ವಿಭಾಗ. ಕಮಲಾ ಕೆ–ಉಪ ಸಂರಕ್ಷಣಾಧಿಕಾರಿ, ಕುಂದಾಪುರ ವಿಭಾಗ. ಎಸ್. ಪ್ರಭಾಕರನ್‌–ಉಪ ಸಂರಕ್ಷಣಾಧಿಕಾರಿ, ಮಡಿಕೇರಿ ವಿಭಾಗ. ಎಸ್. ಚಂದ್ರಶೇಖರ ನಾಯಕ–ಉಪ ಸಂರಕ್ಷಣಾಧಿಕಾರಿ, ಚಿತ್ರದುರ್ಗ ವಿಭಾಗ.

ಕೆಎಎಸ್‌: ಪ್ರಕಾಶ್ ಜೆ ನಿಟ್ಟಾಲಿ–ಉಪ ಕಾರ್ಯದರ್ಶಿ, ಇಂಧನ ಇಲಾಖೆ. ಅಶೋಕ ದುಡಗುಂಟಿ–ಆಯುಕ್ತ, ಬೆಳಗಾವಿ ಮಹಾನಗರ ಪಾಲಿಕೆ. ವಿ.ಕೆ. ಪ್ರಸನ್ನಕುಮಾರ್–ಉಪವಿಭಾಗಾಧಿಕಾರಿ, ಹರಪನಹಳ್ಳಿ. ಸಿ. ಮದನಮೋಹನ್–ಸಹಾಯಕ ಕಾರ್ಯದರ್ಶಿ, ರಾಮನಗರ ಜಿಲ್ಲಾ ಪಂಚಾಯಿತಿ. ಬಲರಾಮ ಲಮಾಣಿ–ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ. ಜಿ.ಎಚ್. ನಾಗಹನುಮಯ್ಯ–ವಿಶೇಷ ಭೂಸ್ವಾಧೀನಾಧಿಕಾರಿ, ಕೆಐಎಡಿಬಿ, ಬೆಂಗಳೂರು. ಆರ್.ಚಂದ್ರಯ್ಯ–ವಿಶೇಷ ಭೂಸ್ವಾಧೀನಾಧಿಕಾರಿ, ತುಮಕೂರು–ದಾವಣಗೆರೆ ಬ್ರಾಡ್ ಗೇಜ್ ರೈಲ್ವೆ ಯೋಜನೆ. ಡಿ.ಬಿ. ನಟೇಶ್–ಉಪ ಪ್ರಧಾನ ವ್ಯವಸ್ಥಾಪಕ, ಕರ್ನಾಟಕ ಗೃಹ ಮಂಡಳಿ. ಕೆ. ರಾಜು–ಆಯುಕ್ತ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ. ಆರ್. ಕವಿತಾರಾಣಿ– ಕಾರ್ಯದರ್ಶಿ, ವಿದ್ಯುತ್‌ ನಿಯಂತ್ರಣ ಆಯೋಗ. ಎಂ. ರಾಚಪ್ಪ– ಆಯುಕ್ತ, ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರ. ಜಿ. ರಶ್ಮಿ–ಮುಖ್ಯ ಜಾಗೃತ ಅಧಿಕಾರಿ, ಆರೋಗ್ಯ ಇಲಾಖೆ. ಶಶಿಕುಮಾರ್–ಹೆಚ್ಚುವರಿ ಆಯುಕ್ತ, ಮೈಸೂರು ಮಹಾನಗರ ಪಾಲಿಕೆ. ವಿಶ್ವನಾಥ ಹಿರೇಮಠ–ಉಪ ಕಾರ್ಯದರ್ಶಿ, ಒಳಾಡಳಿತ. ಬೆಂಗಳೂರು.

ಇವರ ಜತೆಗೆ 12 ಉಪ ತಹಶೀಲ್ದಾರ್ ಹಾಗೂ ಶಿರಸ್ತೇದಾರ್ ಅವರನ್ನೂ ವರ್ಗಾವಣೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.