ADVERTISEMENT

ಐಐಎಸ್‌ಸಿ ದುರಂತ; ₹ 10 ಲಕ್ಷ ಪರಿಹಾರ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2018, 16:15 IST
Last Updated 7 ಡಿಸೆಂಬರ್ 2018, 16:15 IST
   

ಬೆಂಗಳೂರು:‌ ‘ಸಿಲಿಂಡರ್ ಸ್ಫೋಟದಿಂದ ಮೃತಪಟ್ಟ ಪ್ರಾಜೆಕ್ಟ್ ಎಂಜಿನಿಯರ್ ಪಿ.ಮನೋಜ್ ಕುಮಾರ್ ಕುಟುಂಬಕ್ಕೆ ₹ 10 ಲಕ್ಷ ಪರಿಹಾರ ನೀಡಲಾಗುವುದು’ ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಪ್ರಕಟಣೆಯಲ್ಲಿ ತಿಳಿಸಿದೆ.

ಐಐಎಸ್‌ಸಿ ನಿರ್ದೇಶಕರು ಹಾಗೂ ಅಧಿಕಾರಿಗಳ ತಂಡವು ದುರಂತದಲ್ಲಿ ಗಾಯಗೊಂಡಿರುವ ಅತುಲ್ಯ ಉದಯ್‌ಕುಮಾರ್, ಕಾರ್ತಿಕ್ ಶೆಣೈ ಹಾಗೂ ನರೇಶ್ ಕುಮಾರ್ ಅವರನ್ನು ಶುಕ್ರವಾರ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದೆ. ‘ಚಿಕಿತ್ಸೆಯ ವೆಚ್ಚ ವಿಮೆ ಮೊತ್ತಕ್ಕಿಂತ ಹೆಚ್ಚಾದರೆ ಸಂಸ್ಥೆಯೇ ಭರಿಸುತ್ತದೆ’ ಎಂದು ಗಾಯಾಳುಗಳ ಸಂಬಂಧಿಕರಿಗೆ ಭರವಸೆ ನೀಡಿದೆ.

ಚೇತರಿಕೆ: ‘ಗಾಯಾಳುಗಳ ಆರೋಗ್ಯ ಸ್ಥಿತಿ ಸುಧಾರಿಸುತ್ತಿದ್ದು, ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ. ಶನಿವಾರ ಸಾಮಾನ್ಯ ವಾರ್ಡ್‌ಗೆ ಶಿಫ್ಟ್ ಮಾಡಲಾಗುವುದು’ ಎಂದು ವೈದ್ಯರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.